ಸಂತ್ರಸ್ತರಿಗಾಗಿ ಈ ಗ್ರಾಮಗಳಲ್ಲಿ ಸ್ಥಾಪಿಸಿರುವ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಸಂತ್ರಸರಿಗೆ ಸರಿಯಾದ ಆಹಾರ ಹಾಗೂ ವೈದ್ಯಕೀಯ ಸೌಲಭ್ಯ ದೊರುಕುತ್ತಿದೆಯೇ ಎಂದು ವಿಚಾರಿಸಿದರು. ಪ್ರವಾಹದಿಂದಾಗಿ ಕುಸಿದ ಮನೆಗಳನ್ನು ವೀಕ್ಷಿಸಿ, ನಷ್ಟದ ವಿವರವನ್ನು ಪ್ರಮಾಣಿಸಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ಧನ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.