‘ಕಾಂಗ್ರೆಸ್ನವರಿಗೆ ಹುಬ್ಬಳ್ಳಿ ಅಂದರೆ ಬಹಳ ಪ್ರೀತಿ. ಒಂದು ಕಡೆ ಅಲ್ಪ ಸಂಖ್ಯಾತರಿಗೆ ₹10 ಸಾವಿರ ಕೋಟಿ ಕೊಡುವುದಾಗಿ ಹೇಳಿದರು. ಮತ್ತೊಂದು ಕಡೆ ಹಿಂದೂ ಕಾರ್ಯಕರ್ತನ ಬಂಧನ ಮಾಡಿದ್ದಾರೆ, ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರ ಪರ ಮಾತನಾಡುತ್ತಿದ್ದಾರೆ’ ಎಂದು ಕುಟುಕಿದರು.
‘ಕಾರ್ಯಕರ್ತರ ಹೋರಾಟದ ಬಲದಿಂದಲೇ ರಾಮಮಂದಿರ ನಿರ್ಮಾಣ ಆಗುತ್ತಿದೆ. ಕಾಂಗ್ರೆಸ್ ಒತ್ತಡ ಹೇರುವ ಮೂಲಕ ಕಾರ್ಯಕರ್ತನ ಬಂಧನ ಮಾಡಿಸಿದೆ. ಇದರಿಂದ ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಕಾಂಗ್ರೆಸ್ ಸರ್ಕಾರವೇ ಕಾರಣ’ ಎಂದು ಎಚ್ಚರಿಸಿದರು.
‘ಈ ಹಿಂದೆ ಹಲವು ಪೊಲೀಸ್ ಆಯುಕ್ತರು ಆಗಿಹೋದರೂ ಅವರು ಏಕೆ ಬಂಧನ ಮಾಡಲಿಲ್ಲ. ಈಗಿನ ಕಮಿಷನರ್ ಹಳೇ ಹುಬ್ಬಳ್ಳಿ ಗಲಾಟೆ ಮಾಡಿದವರ ಬಿಡುಗಡೆಗೆ ಪತ್ರ ಬರೆದಿದ್ದರು. ಅವರು ಅಮಾಯಕರು ಎಂದು ಮುದ್ರೆ ಹಾಕಿದಿರಿ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಎಂದರೆ ಹಿಂದೂ ವಿರೋಧಿ ಪಕ್ಷ. ಆರು ತಿಂಗಳಿಂದ ಈ ಸರ್ಕಾರ ಹಿಟ್ಲರ್ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಪೊಲೀಸ್ ಇಲಾಖೆಯನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳಬಾರದು’ ಎಂದು ಆಗ್ರಹಿಸಿದರು.
ಶಾಸಕರು ಬಂಧಿತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.