2020 ಅಂತ್ಯದಲ್ಲಿ ಅವರ ಆಲೋಚನೆ ಕಾರ್ಯರೂಪಕ್ಕೆ ಬಂದೇ ಬಿಟ್ಟಿತು. ಒಂದು ಎಕರೆ ಹೊಲವನ್ನು ಗೇಣಿಗೆ ಪಡೆದು ಸಿರಿಧಾನ್ಯ, ಶೇಂಗಾ, ಕಡಲೆ ಬಿತ್ತಿ, ಬೆಳೆ ತೆಗೆದಿದ್ದಾರೆ. ಬೇರೆಯವರ ಹೊಲದಲ್ಲಿ ದುಡಿಯುವ ಬದಲು ತಮ್ಮದೇ ಕನಸಿನ ಹೊಲದಲ್ಲಿ ಬೇವರು ಸುರಿಸಿದ್ದಾರೆ. ಪ್ರತೀ ಹಂತದಲ್ಲೂ ಅನ್ಯರ ಸಹಾಯ ಪಡೆಯದೇ ಸ್ವತಃ ತಾವೇ ಶ್ರಮಿಸಿದ್ದಾರೆ. ಅಕಾಲಿಕ ಮಳೆಗೆ ಶೇಂಗಾ ಬೆಳೆ ಕೈಕೊಟ್ಟರೂ ಸಂಘದ ಸದಸ್ಯೆಯರು ಅದರಿಂದ ಕುಗ್ಗಲಿಲ್ಲ. ತಾವು ಬೆಳೆದ ಬೆಳೆಗೆ ಮೌಲ್ಯವರ್ಧನೆಯ ಗುರಿಯನ್ನೂ ಹೊಂದಿದ್ದಾರೆ. ಒಗ್ಗಟ್ಟಿನಿಂದ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎಂಬುದನ್ನು ವಿನಾಯಕ ಸ್ತ್ರೀ ಶಕ್ತಿ ಸಂಘದ ಮೂಲಕ ರತ್ನಾ ಪ್ರಕಾಶ ಹೊಸಳ್ಳಿ ತೋರಿಸಿಕೊಟ್ಟಿದ್ದಾರೆ.