ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಿಕಾ ಎಸ್.ಜಿ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ‘ಶಾಲೆಗೆ ಬಣ್ಣ ಹಚ್ಚಿಸಲು ಸರ್ಕಾರದಿಂದ ₹20 ಸಾವಿರ ಅನುದಾನ ಬಂದಿದೆ. ಹಲವೆಡೆ ರೈಲಿನ ಮಾದರಿ ಹಾಗೂ ಇನ್ನಿತರ ಕಲಾಕೃತಿಗಳೊಂದಿಗೆ ಗೋಡೆಗಳಿಗೆ ಬಣ್ಣ ಹಚ್ಚ ಅಂದಗೊಳಿಸಲಾಗಿದೆ. ಇದರಿಂದ ಮಕ್ಕಳ ಓದಿಗೆ ಚೆಂದದ ವಾತಾವರಣ ರೂಪಿಸಿ ಓದಲು ಪ್ರೇರೇಪಿಸಿದಂತೆ ಆಗುತ್ತದೆ. ಸರ್ಕಾರದ ಅನುದಾನದ ಜೊತೆಗೆ ಸ್ವಂತ ₹15 ಸಾವಿರ ಖರ್ಚು ಮಾಡಿ ವಿಭಿನ್ನವಾದ ಚಿತ್ರಣ ನೀಡಿದ್ದೇನೆ’ ಎಂದರು. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದು,ಆರ್.ಎಸ್. ಹಿರೇಮಠ ಇನ್ನೊಬ್ಬ ಶಿಕ್ಷಕರು.