ತಂಡದ ಸದಸ್ಯರಾದ ಸಿದ್ದಾರ್ಥ ಜೋಶಿ, ಆಕಾಶ ಭಟ್ಟಾಚಾರ್ಯ, ಮೊಹಮ್ಮದ್ ಇರ್ಷಾದ್ ಮತ್ತು ಶೇಕ್ ಜಾಕೀರ್ ಹುಸೇನ್ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ನರಗುಂದದ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರು ಹೀಗೆ ಎಲ್ಲರಿಂದ ಮಾಹಿತಿ ಸಂಗ್ರಹಿಸಿ ನಾವು ವರದಿ ತಯಾರಿಸಿದ್ದೇವೆ. ಸಮೀರ್ ಹತ್ಯೆ ಮತ್ತು ಅಂದು ನಡೆದ ಶಂಶೀರ್ ಮೇಲಿನ ದಾಳಿಯ ಹಿಂದಿನ ಘಟನೆಗಳ ಬಗ್ಗೆ ನ್ಯಾಯಯುತವಾಗಿ ಮುಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.