ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಕಾರಣದಿಂದ ವಿವಿಧ ರೈಲುಗಳು ರದ್ದು: ನೈರುತ್ಯ ರೈಲ್ವೆ ಪ್ರಕಟಣೆ

Last Updated 7 ಫೆಬ್ರುವರಿ 2023, 2:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಮಗಾರಿ ಕೈಗೊಳ್ಳಲು ನೈರುತ್ಯ ರೈಲ್ವೆಯು ಈ ಕೆಳಗಿನ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ.

ವಿಜಯಪುರ–ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್, ಸೊಲ್ಲಾಪುರ– ಹುಬ್ಬಳ್ಳಿ–ಸೊಲ್ಲಾಪುರ ಡೈಲಿ ಪ್ಯಾಸೆಂಜರ್, ಸೊಲ್ಲಾಪುರ–ಗದಗ ಡೈಲಿ ಎಕ್ಸ್‌ಪ್ರೆಸ್‌ ಹಾಗೂ ಹುಬ್ಬಳ್ಳಿ–ವಿಜಯಪುರ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಫೆ. 7ರಿಂದ 15ರವರೆಗೆ ರದ್ದುಪಡಿಸಲಾಗಿದೆ.

ಹುಬ್ಬಳ್ಳಿ–ವಿಜಯಪುರ ಡೈಲಿ ವಿಶೇಷ ಪ್ಯಾಸೆಂಜರ್ ಅನ್ನು ಫೆ. 8ರಿಂದ 15ರವರೆಗೆ, ವಿಜಯಪುರ–ಹುಬ್ಬಳ್ಳಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ಹಾಗೂ ಗದಗ–ಸೊಲ್ಲಾಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಫೆ. 8ರಿಂದ 16ರವರೆಗೆ ರದ್ದುಪಡಿಸಲಾಗಿದೆ.

ಭಾಗಶಃ ರದ್ದು: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌– ಗದಗ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಬಾಗಲಕೋಟೆ– ಗದಗ ಮಾರ್ಗದ ಸಂಚಾರವನ್ನು ಫೆ. 7ರಿಂದ 15ರವರೆಗೆ ರದ್ದುಪಡಿಸಲಾಗಿದೆ. ಗದಗದಿಂದ ಹೊರಡಬೇಕಿದ್ದ ಇದೇ ರೈಲು ಫೆ. 8ರಿಂದ 16ರವರೆಗೆ ಬಾಗಲಕೋಟೆಯಿಂದ ಸಂಚಾರ ಆರಂಭಿಸಲಿದೆ.

ಮಂಗಳೂರು ಜಂಕ್ಷನ್–ವಿಜಯಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಹುಬ್ಬಳ್ಳಿ–ವಿಜಯಪುರ ಮಾರ್ಗದ ಸಂಚಾರವನ್ನು ಫೆ. 7ರಿಂದ 14ರವರೆಗೆ ರದ್ದುಪಡಿಸಲಾಗಿದೆ. ವಿಜಯಪುರದಿಂದ ಹೊರಡುವ ಇದೇ ರೈಲಿನ ವಿಜಯಪುರ– ಹುಬ್ಬಳ್ಳಿವರೆಗಿನ ಸಂಚಾರವನ್ನು ಫೆ. 8ರಿಂದ 15ರವರೆಗೆ ರದ್ದುಪಡಿಸಲಾಗಿದೆ. ವಿಜಯಪುರ ಬದಲು ಹುಬ್ಬಳ್ಳಿಯಿಂದ ಮಂಗಳೂರಿಗೆ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT