ಪಾಪು, ಮೊಮ್ಮಗಳ (ನನ್ನ ಮಗಳ) ಮದುವೆ ಮಾಡಬೇಕು ಎನ್ನುವ ಆಸೆ ಹೊಂದಿದ್ದರು. ಇದಕ್ಕಾಗಿ ಸ್ವತಃ ಅವರೇ ನಾಲ್ಕೈದು ಕಡೆ ಹುಡುಗನನ್ನೂ ನೋಡಿದ್ದರು. ಆದಿ ಚುಂಚನಗಿರಿಮಠದ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಹೀಗೆ ಹಲವಾರು ಮಠಾಧೀಶರಿಗೆ ನನ್ನ ಮೊಮ್ಮಗಳ ಮದುವೆಗೆ ನೀವೆಲ್ಲರೂ ಬರಬೇಕು ಎಂದು ಹೇಳಿದ್ದರು. ಆದರೆ, ಈ ಆಸೆ ಈಡೇರುವ ಮೊದಲೇ ಇಹಲೋಕ ತ್ಯಜಿಸಿದ್ದು ಸಾಕಷ್ಟು ನೋವು ತಂದಿದೆ.