ಸಂಜೆಯ 5.15ರ ಹೊತ್ತಿಗೆ ಆರಂಭವಾದ ಮಳೆ 25 ನಿಮಿಷ ಸುರಿಯಿತು. ಹೊಸೂರು ವೃತ್ತ, ಚನ್ನಮ್ಮನ ವೃತ್ತ, ಕಾಟನ್ ಮಾರ್ಕೆಟ್, ವಿದ್ಯಾನಗರ, ದೇಶಪಾಂಡೆ ನಗರ, ದುರ್ಗದ ಬೈಲ್, ಮೇದಾರ ಓಣಿ ಸೇರಿದಂತೆ ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಎಂದಿನಂತೆ ಬಿಆರ್ಟಿಎಸ್ ರಸ್ತೆ ತಗ್ಗು ಪ್ರದೇಶಗಳಲ್ಲಿ ಹಳ್ಳವಾಗಿ ಮಾರ್ಪಟ್ಟಿತು.