ಎನ್ಸಿಪಿಯ ಯುವ ಘಟಕದ ಮುಖಂಡರಾದ ಲಕ್ಷ್ಮಣ ದೀಕ್ಷಿತ, ಸಿದ್ದು ಪೂಜಾರ, ಕುಬೇರ ಪವಾರ ಹಾಗೂ ರಾಘವೇಂದ್ರ ಜಗಳೂರ, ‘ಸಂಸದ ಪ್ರಹ್ಲಾದ ಜೋಶಿ ಅವರು ಜಿಲ್ಲೆಯ ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಯುವ ಧುರೀಣ ರಾಜು ಅವರನ್ನು ಬೆಂಬಲಿಸುತ್ತಿದ್ದೇವೆ. ಪಕ್ಷದ ಕಾರ್ಯಕರ್ತರಿಗೂ ರಾಜು ಅವರ ಪರ ಪ್ರಚಾರ ಮಾಡುವಂತೆ ತಿಳಿಸಿದ್ದೇವೆ’ ಎಂದರು.