ಹುಬ್ಬಳ್ಳಿಯ ಕಮರಿಪೇಟೆಯ ರಾಮಮಂದಿರದಲ್ಲಿ ದೇವರಿಗೆ ಆಕರ್ಷಕ ಅಲಂಕಾರ ಮಾಡಲಾಗಿತ್ತು. ತೊಟ್ಟಿಲ ಪೂಜೆಯಲ್ಲಿ ಭಕ್ತರು ಪಾಲ್ಗೊಂಡರು. ದಾಜಿಬಾನ ಪೇಟೆಯ ಗೌಳಿ ಗಲ್ಲಿ ಎರಡನೇ ತಿರುವಿನಲ್ಲಿರುವ ರಾಮ ಮಂದಿರದಲ್ಲಿ ಭಜನೆ ನಡೆಯಿತು. ಹುಬ್ಬಳ್ಳಿಯ ಶಿರಡಿನಗರದಲ್ಲಿರುವ ಸಾಯಿ ಬಾಬಾಗೆ ಶ್ರೀರಾಮನ ಅಲಂಕಾರ ಮಾಡಲಾಗಿತ್ತು.