ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಯಲಿವಾಳ– ಹೊಸಕಟ್ಟಿ ರಸ್ತೆಗೆ ಭೂಮಿ ಪೂಜೆ

Last Updated 26 ಜೂನ್ 2022, 4:01 IST
ಅಕ್ಷರ ಗಾತ್ರ

ಕುಂದಗೋಳ: ತಾಲ್ಲೂಕಿನ ಯಲಿವಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ₹ 69 ಲಕ್ಷ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಚಾಲನೆ ನೀಡಿದರು.

‘ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ, ನಡೆದುಕೊಂಡಿದ್ದೇನೆ. ಜಲಜೀವನ ಮಿಷನ್ ಯೋಜನೆ ಅಡಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಮತಕ್ಷೇತ್ರದಲ್ಲಿ ₹ 25 ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ’ ಎಂದು ಹೇಳಿದರು.

ಶ್ರೀಕಂಠಗೌಡ್ರ ಹಿರೇಗೌಡ್ರ, ಅಪ್ಪಣ್ಣ ಹಿರೇಗೌಡ್ರ, ವೀರಭದ್ರ ಚಿಕ್ಕನಗೌಡ್ರ, ಮಂಜು ಶಿರಗುಪ್ಪಿ, ನಿಂಗನಗೌಡ ಬಂದಾಗೌಡತಿ, ಗಿರೀಶ ಮುದಿಗೌಡ್ರ, ಗುರುಶಾಂತ ಗಂದೂಡಿ, ಬಾಪು ಚನವಿರಗೌಡ್ರ, ಪಕ್ಕಿರಗೌಡ್ರ ಚಿಕ್ಕನಗೌಡ್ರ, ಸುರೇಶ ದಾನಪ್ಪನವರ, ಕೆ.ಎಂ. ಜವಾಯಿ, ಎನ್.ಎನ್. ಮುಗಳಿ, ಬಸಪ್ಪ ದೊಡ್ಡಶೆಟ್ರ, ಗುತ್ತಿಗೆದಾರ ಪಂಚಯ್ಯ ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT