ವಿಚಾರಣೆ ವೇಳೆ ರಾಜಲಕ್ಷ್ಮೀ ತಾಯಿ ಡಾ.ಶೋಭಾ ಸ್ವತಃ ವಾದ ಮಂಡಿಸಿ, ‘ನಾನು ಮತ್ತು ನನ್ನ ಅಂಗವಿಕಲ ಮಗಳು 2016ರ ಆಗಸ್ಟ್ನಲ್ಲಿ ಸ್ಕಾಟ್ಲೆಂಡ್ ಪ್ರವಾಸಕ್ಕೆಂದು ಲಂಡನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆವು. ಆದರೆ, ಅಲ್ಲಿ ನನ್ನ ಮಗಳಿಗೆ ಗಾಲಿ ಕುರ್ಚಿ ನೀಡದೆ ಏರ್ ಇಂಡಿಯಾ ವಿಮಾನ ಸಿಬ್ಬಂದಿ ತೀವ್ರ ತೊಂದರೆ ಉಂಟು ಮಾಡಿದರು’ ಎಂದು ಆರೋಪಿಸಿದರು.