<p>ಪ್ರಜಾವಾಣಿ ವಾರ್ತೆ</p>.<p>ಹುಬ್ಬಳ್ಳಿ: ಪ್ರಸ್ತುತ ವರ್ಷ ನಗರದ ಉಣಕಲ್, ಗೋಪನಕೊಪ್ಪ, ದೇವಾಂಗಪೇಟೆ ಗ್ರಾಮದ ದೇವಿಯರಿಗೆ ಬಣ್ಣ ಹಚ್ಚುವುದರಿಂದ ಹೋಳಿ ಹಬ್ಬದಂದು ಬಣ್ಣ ಆಟಕ್ಕೆ ಗ್ರಾಮಸ್ಥರು ನಿಷೇಧ ಹೇರಿದ್ದಾರೆ.</p>.<p>ಉಣಕಲ್ ಭಾಗದಲ್ಲಿ ಹೋಳಿ ಹುಣ್ಣಿಮೆಯಂದು ಹಾಗೂ ಗೋಪನಕೊಪ್ಪದಲ್ಲಿ ರಂಗ ಪಂಚಮಿಯಂದು ಸಾರ್ವಜನಿಕರು ಬಣ್ಣವಾಡಿ, ಕಾಮ ದಹನ ಮಾಡುತ್ತಿದ್ದರು. ಪ್ರಸ್ತುತ ವರ್ಷ ಉಣಕಲ್ನಲ್ಲಿ ದ್ಯಾವಮ್ಮ ಮತ್ತು ದುರ್ಗಮ್ಮ ದೇವಿಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಇರುವುದರಿಂದ, ಮೂರ್ತಿಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಈ ಕುರಿತು ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಾರೆ.</p>.<p>ಗೋಪನಕೊಪ್ಪ ಮತ್ತು ದೇವಾಂಗ ಪೇಟೆ ಗ್ರಾಮದ ದ್ವಾಮವ್ವ ಮೂರ್ತಿಗೆಗೂ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಮಾರ್ಚ್ 12 ರಿಂದ ಮಾರ್ಚ್ 17ರವರೆಗೆ ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ವಾಡಿಕೆಯಂತೆ ಗ್ರಾಮದ ವ್ಯಾಪ್ತಿಯಲ್ಲಿ ಬಣ್ಣ ಆಡುವುದಿಲ್ಲ. ಹೀಗಾಗಿ ಆ ದಿನಗಳಂದು ಯಾರೂ ಬಣ್ಣ ಆಡಬಾರದು ಎಂದು ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ ಎಂದು ರೈತ ಈಶ್ವರಗೌಡ ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಹುಬ್ಬಳ್ಳಿ: ಪ್ರಸ್ತುತ ವರ್ಷ ನಗರದ ಉಣಕಲ್, ಗೋಪನಕೊಪ್ಪ, ದೇವಾಂಗಪೇಟೆ ಗ್ರಾಮದ ದೇವಿಯರಿಗೆ ಬಣ್ಣ ಹಚ್ಚುವುದರಿಂದ ಹೋಳಿ ಹಬ್ಬದಂದು ಬಣ್ಣ ಆಟಕ್ಕೆ ಗ್ರಾಮಸ್ಥರು ನಿಷೇಧ ಹೇರಿದ್ದಾರೆ.</p>.<p>ಉಣಕಲ್ ಭಾಗದಲ್ಲಿ ಹೋಳಿ ಹುಣ್ಣಿಮೆಯಂದು ಹಾಗೂ ಗೋಪನಕೊಪ್ಪದಲ್ಲಿ ರಂಗ ಪಂಚಮಿಯಂದು ಸಾರ್ವಜನಿಕರು ಬಣ್ಣವಾಡಿ, ಕಾಮ ದಹನ ಮಾಡುತ್ತಿದ್ದರು. ಪ್ರಸ್ತುತ ವರ್ಷ ಉಣಕಲ್ನಲ್ಲಿ ದ್ಯಾವಮ್ಮ ಮತ್ತು ದುರ್ಗಮ್ಮ ದೇವಿಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಇರುವುದರಿಂದ, ಮೂರ್ತಿಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಈ ಕುರಿತು ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಾರೆ.</p>.<p>ಗೋಪನಕೊಪ್ಪ ಮತ್ತು ದೇವಾಂಗ ಪೇಟೆ ಗ್ರಾಮದ ದ್ವಾಮವ್ವ ಮೂರ್ತಿಗೆಗೂ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಮಾರ್ಚ್ 12 ರಿಂದ ಮಾರ್ಚ್ 17ರವರೆಗೆ ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ವಾಡಿಕೆಯಂತೆ ಗ್ರಾಮದ ವ್ಯಾಪ್ತಿಯಲ್ಲಿ ಬಣ್ಣ ಆಡುವುದಿಲ್ಲ. ಹೀಗಾಗಿ ಆ ದಿನಗಳಂದು ಯಾರೂ ಬಣ್ಣ ಆಡಬಾರದು ಎಂದು ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ ಎಂದು ರೈತ ಈಶ್ವರಗೌಡ ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>