ಫೇಸ್ಬುಕ್ನಲ್ಲಿ ತಮ್ಮ ಭಾವಚಿತ್ರದೊಂದಿಗೆ ಅಸ್ಪೃಶ್ಯತೆ ಕುರಿತು ಬರೆದಿರುವ ಅವರು, ‘ಅಸ್ಪೃಶ್ಯನಾಗಿ ಜನಿಸಿದೆ, ಅಸ್ಪಶ್ಯನಾಗಿ ಬೆಳೆದೆ. ರಾಜ್ಯಮಟ್ಟದ ಅಧಿಕಾರಿಯಾಗಿದ್ದರೂ ಜಾತಿ ರಾಕ್ಷಸರ ನಡುವೆ ಗುಲಾಮ– ಅಸ್ಪೃಶ್ಯನಾಗಿ ಇಂದು ಬದುಕುತ್ತಿದ್ದೇನೆ. ಎರಡು ವರ್ಷಗಳಿಂದಜಾತಿ ಎಂಬ ಕ್ಯಾನ್ಸರ್ ನನ್ನನ್ನು ಬಾಧಿಸಿದೆ. ನಾನು ಅವಮಾನಕ್ಕೀಡಾಗಿದ್ದೇನೆ. ಹೀಗಿದ್ದರೂ ಜಾತಿ ರಾಕ್ಷಸರತ್ತ ನನ್ನ ಪ್ರೀತಿ ಇದ್ದೇ ಇದೆ’ ಎಂದು ಬರೆದುಕೊಂಡಿದ್ದಾರೆ.