ಧಾರವಾಡ: `ರಾಜ್ಯದಲ್ಲಿ 12,470 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಶಿಫಾರಸು ನೀಡಿದ ಪ್ರೊ. ಗೋವಿಂದ ವರದಿ ಅದು ವರದಿಯಲ್ಲ, ರವದಿ ಇದ್ದಂತೆ~ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ವ್ಯಂಗ್ಯವಾಡಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಪ್ರೊ.ಗೋವಿಂದ ವರದಿ ಕುರಿತು ಚರ್ಚಿಸಲು ಭಾನುವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. `ಈ ವರದಿಯ ಕುರಿತು ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವರದಿಯಿಂದ ಸಂಬಂಧಗಳು ಸರಿಯಾಗಿ ಉಳಿಯದೇ ಗೊಂದಲಗಳು ಸೃಷ್ಟಿಯಾಗುತ್ತವೆ.