<p><strong>ಹುಬ್ಬಳ್ಳಿ: </strong>ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರ್ಯಾಲಿಯಿಂದ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಎಷ್ಟು ಲಾಭವಾಗಬಹುದು ಗೊತ್ತಿಲ್ಲ. ಆದರೆ, ಮೋದಿ ಪಾಲ್ಗೊಂಡಿದ್ದ ‘ಭಾರತ ಗೆಲ್ಲಿಸಿ’ ರ್ಯಾಲಿ ಸಂದರ್ಭದಲ್ಲಿ ಮಾತ್ರ ಸಣ್ಣ–ಪುಟ್ಟ ವ್ಯಾಪಾರಸ್ಥರು ತಮ್ಮ ಜೇಬು ತುಂಬಿಸಿಕೊಂಡು ಬೀಗುತ್ತಿದ್ದುದು ಕಂಡು ಬಂದಿತು.<br /> <br /> ನೀರಿನ ಬಾಟಲು, ಅನಾನಸ್, ಕಲ್ಲಂಗಡಿ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆದಿತ್ತು. ಅದೂ ಮಾಮೂಲಿಗಿಂತ ದುಪ್ಪಟ್ಟು ಬೆಲೆಯಲ್ಲಿ!<br /> ‘ನಾನು ತಂದಿದ್ದ ಎಲ್ಲಾ 75 ಅನಾನಸ್ ಹಣ್ಣುಗಳು ಖರ್ಚಾಗಿದ್ದು ನಾಲ್ಕು ಗಂಟೆ ಅವಧಿಯಲ್ಲಿ ₨ 3,000 ಗಳಿಸಿದ್ದೇನೆ’ ಎನ್ನುವ ರಫೀಕ್, ₨ 10ಕ್ಕೆ ಒಂದು ಹೋಳು ಅನಾನಸ್ ಮಾರಾಟ ಮಾಡಿದರೂ ಜನ ಮುಗಿದು ಬಿದ್ದು ಕೊಂಡುಕೊಳ್ಳುತ್ತಿದ್ದರು.<br /> <br /> ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ರಾಜೇಶ, ಸುಮನೇಶ ಅವರ ಅಭಿಪ್ರಾಯವೂ ಇದೇ ಆಗಿತ್ತು. ‘ನಾವು ತಂದಿದ್ದ 200 ಕಲ್ಲಂಗಡಿ ಹಣ್ಣುಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾದವು. ಇನ್ನೂ 100 ಹಣ್ಣುಗಳನ್ನು ತಂದಿದ್ದರೆ ಅವುಗಳು ಸಹ ಮಾರಾಟವಾಗುತ್ತಿದ್ದವು’ ಎಂದು ಖುಷಿಯಿಂದ ಹೇಳಿದರು.<br /> <br /> ಇದು ಹಣ್ಣು, ನೀರು, ತಂಪು ಪಾನೀಯಗಳ ಮಾರಾಟದ ಮಾತಾಯಿತು. ಬಿಜೆಪಿ ಮತ್ತು ನರೇಂದ್ರ ಮೋದಿ ಕುರಿತ ಪುಸ್ತಕಗಳನ್ನು ಮಾರಾಟ ಮಾಡಲು ಸಪ್ನ ಬುಕ್ ಹೌಸ್ ಅಂಗಡಿಯನ್ನು ತೆರೆದಿತ್ತು.<br /> <br /> ‘ಒಟ್ಟು 200 ಪುಸ್ತಕಗಳನ್ನು ತಂದಿದ್ದೆವು. ಮೊದಲ ಒಂದು ಗಂಟೆ ಅವಧಿಯಲ್ಲಿ 45 ಪುಸ್ತಕಗಳು ಖರ್ಚಾದವು’ ಎಂದು ಸಂಸ್ಥೆಯ ವ್ಯವಸ್ಥಾಪಕ ಎಂ.ವಿ.ರಘು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರ್ಯಾಲಿಯಿಂದ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಎಷ್ಟು ಲಾಭವಾಗಬಹುದು ಗೊತ್ತಿಲ್ಲ. ಆದರೆ, ಮೋದಿ ಪಾಲ್ಗೊಂಡಿದ್ದ ‘ಭಾರತ ಗೆಲ್ಲಿಸಿ’ ರ್ಯಾಲಿ ಸಂದರ್ಭದಲ್ಲಿ ಮಾತ್ರ ಸಣ್ಣ–ಪುಟ್ಟ ವ್ಯಾಪಾರಸ್ಥರು ತಮ್ಮ ಜೇಬು ತುಂಬಿಸಿಕೊಂಡು ಬೀಗುತ್ತಿದ್ದುದು ಕಂಡು ಬಂದಿತು.<br /> <br /> ನೀರಿನ ಬಾಟಲು, ಅನಾನಸ್, ಕಲ್ಲಂಗಡಿ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆದಿತ್ತು. ಅದೂ ಮಾಮೂಲಿಗಿಂತ ದುಪ್ಪಟ್ಟು ಬೆಲೆಯಲ್ಲಿ!<br /> ‘ನಾನು ತಂದಿದ್ದ ಎಲ್ಲಾ 75 ಅನಾನಸ್ ಹಣ್ಣುಗಳು ಖರ್ಚಾಗಿದ್ದು ನಾಲ್ಕು ಗಂಟೆ ಅವಧಿಯಲ್ಲಿ ₨ 3,000 ಗಳಿಸಿದ್ದೇನೆ’ ಎನ್ನುವ ರಫೀಕ್, ₨ 10ಕ್ಕೆ ಒಂದು ಹೋಳು ಅನಾನಸ್ ಮಾರಾಟ ಮಾಡಿದರೂ ಜನ ಮುಗಿದು ಬಿದ್ದು ಕೊಂಡುಕೊಳ್ಳುತ್ತಿದ್ದರು.<br /> <br /> ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ರಾಜೇಶ, ಸುಮನೇಶ ಅವರ ಅಭಿಪ್ರಾಯವೂ ಇದೇ ಆಗಿತ್ತು. ‘ನಾವು ತಂದಿದ್ದ 200 ಕಲ್ಲಂಗಡಿ ಹಣ್ಣುಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾದವು. ಇನ್ನೂ 100 ಹಣ್ಣುಗಳನ್ನು ತಂದಿದ್ದರೆ ಅವುಗಳು ಸಹ ಮಾರಾಟವಾಗುತ್ತಿದ್ದವು’ ಎಂದು ಖುಷಿಯಿಂದ ಹೇಳಿದರು.<br /> <br /> ಇದು ಹಣ್ಣು, ನೀರು, ತಂಪು ಪಾನೀಯಗಳ ಮಾರಾಟದ ಮಾತಾಯಿತು. ಬಿಜೆಪಿ ಮತ್ತು ನರೇಂದ್ರ ಮೋದಿ ಕುರಿತ ಪುಸ್ತಕಗಳನ್ನು ಮಾರಾಟ ಮಾಡಲು ಸಪ್ನ ಬುಕ್ ಹೌಸ್ ಅಂಗಡಿಯನ್ನು ತೆರೆದಿತ್ತು.<br /> <br /> ‘ಒಟ್ಟು 200 ಪುಸ್ತಕಗಳನ್ನು ತಂದಿದ್ದೆವು. ಮೊದಲ ಒಂದು ಗಂಟೆ ಅವಧಿಯಲ್ಲಿ 45 ಪುಸ್ತಕಗಳು ಖರ್ಚಾದವು’ ಎಂದು ಸಂಸ್ಥೆಯ ವ್ಯವಸ್ಥಾಪಕ ಎಂ.ವಿ.ರಘು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>