ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢ ಮಠ ಟ್ರಸ್ಟ್‌ ಕಮಿಟಿ: ನೂತನ ಧರ್ಮದರ್ಶಿಗಳ ಆಯ್ಕೆ

Last Updated 30 ಮಾರ್ಚ್ 2018, 5:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್‌ ಕಮಿಟಿಗೆ 2018ರ ಮಾರ್ಚ್‌ 26ರಿಂದ ಮುಂದಿನ ಐದು ವರ್ಷದ ಅವಧಿಗೆ ನೂತನವಾಗಿ 17 ಧರ್ಮದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಕಮಿಟಿ ಮುಖ್ಯ ಆಡಳಿತಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ನೇಮಕದ ಆದೇಶ ಹೊರಡಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

369 ಅರ್ಜಿಗಳನ್ನು ಪರಿಶೀಲಿಸಿ, ಎಲ್ಲ ಅರ್ಜಿದಾರರಿಗೆ ಮಾ.2ರಂದು ಸಂದರ್ಶನ ನಡೆಸಲಾಗಿತ್ತು. ಈ ಪೈಕಿ 11 ಧರ್ಮದರ್ಶಿಗಳನ್ನು ಹುಬ್ಬಳ್ಳಿಯಿಂದ ಹಾಗೂ ಹುಬ್ಬಳ್ಳಿಯೇತರ ಪ್ರದೇಶಗಳಿಂದ 6 ಧರ್ಮದರ್ಶಿಗಳನ್ನು ಆಯ್ಕೆ ಮಾಡಲಾಗಿದೆ.

ನೂತನ ಧರ್ಮದರ್ಶಿಗಳು: ಹುಬ್ಬಳ್ಳಿ ಗಾಮನಗಟ್ಟಿಯ ದೇವೇಂದ್ರಪ್ಪ ದ್ಯಾಮಪ್ಪ ಮಳಗಿ, ಆರೂಢನಗರದ ಡಾ. ಬಸವನಗೌಡ ವೀರನಗೌಡ ಸಂಕನಗೌಡರ, ಶಕ್ತಿನಗರದ ವಿಜಯಲಕ್ಷ್ಮಿ ವಿ. ಪಾಟೀಲ, ಸಹದೇವ ನಗರದ ಸಿದ್ಧರಾಮಪ್ಪ ಈರಬಸಪ್ಪ ಕೋಲಕುರ, ಚೇತನ ಕಾಲೇಜು ರಸ್ತೆಯ ಶಿವರುದ್ರಪ್ಪ ದಾನಪ್ಪ ಉಕ್ಕಲಿ, ವಾಸವಿನಗರದ ಗಣಪತಿ ಶಿವಪ್ಪ ನಾಯಕ, ಮಧುರಾ ಕಾಲೊನಿಯ ಧರಣೇಂದ್ರ ಧರ್ಮಪ್ಪ ಜವಳಿ, ಸಂತೋಷನಗರದ ಬಸವರಾಜ ಚೆನ್ನಬಸಪ್ಪ ಕಲ್ಯಾಣಶೆಟ್ಟರ, ಅಕ್ಷಯ ಪಾರ್ಕ್‌ನ ನಾರಾಯಣ ಲಕ್ಷ್ಮಣಸಾ ನಿರಂಜನ, ಶಕ್ತಿನಗರದ ಯಲ್ಲಪ್ಪ ಅಡಿ ವೆಪ್ಪ ದೊಡ್ಡಮನಿ, ಹಳೇ ಹುಬ್ಬಳ್ಳಿಯ ನಾರಾಯಣಪ್ರಸಾದ ಅಪ್ಪಾಪ್ರಸಾದ ಪಾಠಕ್, ಧಾರವಾಡ ಸಾರಸ್ವತಪುರದ ಕೆಂಚನಗೌಡ ಲಿಂಗನಗೌಡ ಪಾಟೀಲ, ಮಾಳಮಡ್ಡಿಯ ಹನುಮಂತ ತಿಮ್ಮಾಜಿ ಕೊಟಬಾಗಿ, ಕೊಟ್ಟೂರೇಶ್ವರ ಕಾಡಪ್ಪ ತೆರಗುಂಟಿ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಹೇಶಪ್ಪ ಚಂದ್ರಪ್ಪ ಹನಗೋಡಿ, ಬೆಳಗಾವಿ ಜಿಲ್ಲೆ ಗೋಕಾಕಿನ ಚಿಕ್ಕ ನಂದಿಯ ಶ್ಯಾಮಾನಂದ ಬಾಳಪ್ಪ ಪೂಜೇರಿ, ದಾವಣಗೆರೆಯ ಡಾ. ಲತಾದೇವಿ ಶ್ರೀಮಂತ ಕೊಲಕ್ಕೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT