ಅಧಿಕಾರಿ ಎಸ್. ವೀರಾಜ್ ಮಾತನಾಡಿ, ನೂತನವಾಗಿ ಆರಂಭಗೊಂಡಿರುವ ಘಟಕದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಶಾಲಾ ಕೈತೋಟದ ನಿರ್ವಹಣೆ, ಶಾಲಾ ಆವರಣದ ಸ್ವಚ್ಛತೆ, ಪ್ರಾಣಿ ಪಕ್ಷಿಗಳ ವೀಕ್ಷಣೆ, ಅವುಗಳ ಪರಿಚಯ, ಅವುಗಳ ಜೀವನ ವಿಧಾನ, ಕೃಷಿ ಬಗ್ಗೆ ತಿಳಿವಳಿಕೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆಲ್ಲ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.