ಮೂರು ತಿಂಗಳ ಹಿಂದೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ತಪಾಸಣಾ ಕೇಂದ್ರಗಳಲ್ಲಿ ಭಾರಿ ಮೊತ್ತದ ಹಣ ವಶಕ್ಕೆ ಪಡೆಯಲಾಗಿತ್ತು. ಸಿಬ್ಬಂದಿ ಚಳಿ, ಗಾಳಿ ಲೆಕ್ಕಿಸದೆ ಹಗಲು–ರಾತ್ರಿ ಕೆಲಸ ಮಾಡಿದ್ದರು. ಅದಕ್ಕಾಗಿ ಈ ಬಾರಿ ತಪಾಸಣಾ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸುವ ಜತೆಗೆ, ಸೂಕ್ತ ಸೌಕರ್ಯವನ್ನೂ ಕಲ್ಪಿಸಲಾಗುತ್ತಿದೆ.