ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿವಾನಂದ ಹಾದಿಮನಿ, ‘ಭೈರವನಾಥ ಪ್ರೌಢಶಾಲೆಗೆ ಸರ್ಕಾರ ಎರಡು ವರ್ಷಗಳಿಂದ ಅನುದಾನ ಸ್ಥಗಿತಗೊಳಿಸಿತ್ತು. ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ (ಕೆಎಟಿ)ವು ಅನುದಾನ ಮುಂದುವರಿಸುವಂತೆ ಆದೇಶಿಸಿದ್ದರಿಂದ, ಶಾಲೆಯ ಮೂಲ ಸೌಕರ್ಯ ಪರಿಶೀಲನೆಗೆ ಬಂದಿದ್ದೆ. ಈ ವೇಳೆ ಬೈರಗೊಂಡ ನನ್ನನ್ನು ಸನ್ಮಾನಿಸಿದರು. ಪ್ರತಿಯಾಗಿ ನಾನು ಅಲ್ಲಿಯೇ ಇದ್ದ ಹೂವಿನ ಹಾರ, ಶಾಲು ಹೊದೆಸಿ ಅವರನ್ನು ಸನ್ಮಾನಿಸಿದೆ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ತಿಳಿಸಿದರು.