‘ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಅವರು ಗದಗ ನಗರದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದಾರೆ. ಅವರ ಕುಟುಂಬ ಶಿವಮೊಗ್ಗದಲ್ಲಿ ನೆಲೆಸಿದೆ. ಗದಗ ನಗರದಲ್ಲಿರುವ ಬಾಡಿಗೆ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಇಲ್ಲಿ ಒಂದು ಇನ್ನೊವಾ ಮತ್ತೊಂದು ಟಾಟಾ ನೆಕ್ಸಾನ್ ಕಾರಿನ ದಾಖಲೆಗಳು ಮಾತ್ರ ಲಭಿಸಿವೆ. ಇನ್ನೊವಾ ಕಾರು ಅವರ ಅತ್ತೆ ಹೆಸರಿನಲ್ಲಿದ್ದರೆ; ನೆಕ್ಸಾನ್ ಕಾರು ಅವರ ಪತ್ನಿಯ ಹೆಸರಿನಲ್ಲಿದೆ’ ಎಂದು ಎಸಿಬಿ ಇನ್ಸ್ಪೆಕ್ಟರ್ ಬಸವರಾಜ್ ಬದ್ನೂರು ತಿಳಿಸಿದರು.