ನೀರಿನ ಸೌಲಭ್ಯ ಪ್ರಗತಿ
ವಾರ್ಡ್ನ ವಿವಿಧೆಡೆ 13 ಕೊಳವೆ ಬಾವಿಗಳಿದ್ದು, ನಿತ್ಯ ಬಳಕೆಗೆ ನೀರು ಪೂರೈಕೆಯಾಗುತ್ತಿದೆ. 8 ದಿನಗಳಿಗೊಮ್ಮೆ ತುಂಗ–ಭದ್ರಾ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನೀರಿನ ಸಮಸ್ಯೆ ಪರಿಹಾರವಾಗಿದೆ. ಆದರೆ, ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯದಿಂದ ನೀರು ಚರಂಡಿ ಪಾಲಾಗುತ್ತಿದೆ. ಬಿಎಸ್ಎನ್ಎಲ್ ಟವರ್ನಿಂದ ಜೋಡ ಮಾರುತಿ ದೇವಸ್ಥಾನದವರೆಗೆ ಹಾಗೂ ಹಸಿರು ಕೆರೆ ಭಾಗದಿಂದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದವರೆಗೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು ಪ್ರವಾಸಿಗರಿಗೆ ಅನುಕೂಲವಾಗಿದೆ.