<p>ನರೇಗಲ್: ಪಟ್ಟಣದ ಭೋವಿ ವಡ್ಡರ್ ಸಮಾಜದ ವತಿಯಿಂದ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣನವರ 226ನೇ ಜಯಂತಿಯನ್ನು ಬುಧವಾರ ಆಚರಣೆ ಮಾಡಲಾಯಿತು.</p>.<p>ಗದಗ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ಮಾತನಾಡಿ, ಕಿತ್ತೂರಿನ ರಾಣಿ ಚೆನ್ನಮ್ಮನವರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬಲಗೈ ಬಂಟನಾಗಿ ಸುಮಾರು 800 ಸೈನಿಕರೊಂದಿಗೆ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ್ ನಾಯಕ ವಡ್ಡರ ಯಲ್ಲಣ್ಣನವರು. ವೈರಿಗಳು 3 ಮೈಲಿ ದೂರ ಇರುವುದನ್ನು ಕೇವಲ ನೆಲಕ್ಕೆ ಕಿವಿ ಕೊಟ್ಟು ಕೇಳಿ ಅದರ ಮಾಹಿತಿಯನ್ನು ರವಾನೆ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಯುದ್ದದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿದ ಮಹಾನ್ ಸೇನಾನಿಯಾಗಿದ್ದಾನೆ. ಈ ಕುರಿತು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಆದ್ದರಿಂದ ಕ್ರಾಂತಿಕಾರಿ ವಡ್ಡರ ಯಲ್ಲಣ್ಣನವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.</p>.<p>ಭೋವಿ ಸಮಾಜದ ಯುವಕರಾದ ರಾಜು ಆದೋನಿ, ವೆಂಕಟೇಶ್ ಕಟ್ಟಿಮನಿ, ಗಣೇಶ್ ಲಕ್ಷ್ಮೇಶ್ವರ, ವೀರೇಶ ಮಣ್ಣೊಡ್ಡರ, ಸುದೀಪ್ ಪಿ, ಸಿರಾಜ್ ಹೊಸಮನಿ, ಕೃಷ್ಣ ಮಣ್ಣೊಡರ, ದರ್ಶನ ಕರಮುಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನರೇಗಲ್: ಪಟ್ಟಣದ ಭೋವಿ ವಡ್ಡರ್ ಸಮಾಜದ ವತಿಯಿಂದ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣನವರ 226ನೇ ಜಯಂತಿಯನ್ನು ಬುಧವಾರ ಆಚರಣೆ ಮಾಡಲಾಯಿತು.</p>.<p>ಗದಗ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ಮಾತನಾಡಿ, ಕಿತ್ತೂರಿನ ರಾಣಿ ಚೆನ್ನಮ್ಮನವರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬಲಗೈ ಬಂಟನಾಗಿ ಸುಮಾರು 800 ಸೈನಿಕರೊಂದಿಗೆ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ್ ನಾಯಕ ವಡ್ಡರ ಯಲ್ಲಣ್ಣನವರು. ವೈರಿಗಳು 3 ಮೈಲಿ ದೂರ ಇರುವುದನ್ನು ಕೇವಲ ನೆಲಕ್ಕೆ ಕಿವಿ ಕೊಟ್ಟು ಕೇಳಿ ಅದರ ಮಾಹಿತಿಯನ್ನು ರವಾನೆ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಯುದ್ದದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿದ ಮಹಾನ್ ಸೇನಾನಿಯಾಗಿದ್ದಾನೆ. ಈ ಕುರಿತು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಆದ್ದರಿಂದ ಕ್ರಾಂತಿಕಾರಿ ವಡ್ಡರ ಯಲ್ಲಣ್ಣನವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.</p>.<p>ಭೋವಿ ಸಮಾಜದ ಯುವಕರಾದ ರಾಜು ಆದೋನಿ, ವೆಂಕಟೇಶ್ ಕಟ್ಟಿಮನಿ, ಗಣೇಶ್ ಲಕ್ಷ್ಮೇಶ್ವರ, ವೀರೇಶ ಮಣ್ಣೊಡ್ಡರ, ಸುದೀಪ್ ಪಿ, ಸಿರಾಜ್ ಹೊಸಮನಿ, ಕೃಷ್ಣ ಮಣ್ಣೊಡರ, ದರ್ಶನ ಕರಮುಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>