ಹೀಗಾಗಿ ಬಿತ್ತನೆ ಮಾಡಿದ ಬೆಳೆಯನ್ನು ರೈತರು ಹರಗುತ್ತಿದ್ದಾರೆ. ಉಂಡೇನಹಳ್ಳಿ ಗ್ರಾಮದ ಮಾಳವ್ವ ನಂದಗಾವಿ ಎಂಬ ರೈತ ಮಹಿಳೆ ಒಂದು ಎಕರೆಯಲ್ಲಿ ಬೆಳೆದಿದ್ದ ಬೇಸಿಗೆ ಶೇಂಗಾವನ್ನು ಈಗಾಗಲೇ ಹರಿಗಿದ್ದಾರೆ. ಅದರಂತೆ ಅದೇ ಗುರುಸಿದ್ದಪ್ಪ ಸಂಗೂರ, ಗುಡದಯ್ಯ ಮಾಡಳ್ಳಿ, ನಾಗಪ್ಪ ಈಳಿಗೇರ, ಗುಡ್ಡಪ್ಪ ಸಂಕ್ಲೀಪೂರ ಸೇರಿದಂತೆ ನೂರಾರು ರೈತರು ಬೆಳೆಯನ್ನು ಹರಗಿದ್ದಾರೆ.