ನಂತರ ಛೋಡಾ ಕ್ಯಾಲ್ನಲ್ಲಿ ಮರಾಠೆ ಭಜನೆ ಹಾಡಿದರಲ್ಲದೆ, ಕೊನೆಯಲ್ಲಿ ಅಕ್ಕಮಹಾದೇವಿಯ ‘ನೆಲದ ಮರೆಯಾ ನಿಧಾನದಂತೆ, ಫಲದ ಮರೆಯಾ ರುಚಿಯಂತೆ’ ವಚನವನ್ನು ಹಾಡಿದರು. ಇವರಿಗೆ ತಬಲಾ ಸಾಥ್ ನೀಡಿದ ಅಲ್ಲಮಪ್ರಭು ಕಡಕೋಳ ಅವರ ಕೈಚಳಕಕ್ಕೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದರು. ಭಾರತೀಯ ವಿದ್ಯಾಭವನದ ಅಶೋಕಕುಮಾರ ನಿರೂಪಿಸಿದರು.