ತೋಟಗಂಟಿ ಗ್ರಾಮದ ರೈತ ಕೃಷ್ಣ ಹನಮಂತಗೌಡ ಪಾಟೀಲ ಬೆಳೆ ಕಳೆದುಕೊಂಡ ರೈತ. ಇವರು 12 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಕಟಾವಿನ ನಂತರ ಮೆಣಸಿನಕಾಯಿಯನ್ನು ಜಕ್ಕಲಿ ಮಾರ್ಗದ ಖಾಲಿ ಜಮೀನೊಂದರಲ್ಲಿ ಒಣಗಲು ಹಾಕಿದ್ದರು. ರಾತ್ರಿ ವೇಳೆ ಅದಕ್ಕೆ ತಾಡಪತ್ರಿ ಹೊದೆಸಿದ್ದರು. ಗುರುವಾರ ರಾತ್ರಿ 10 ಗಂಟೆಯವರೆಗೆ ಜಮೀನಿನಲ್ಲೇ ಕಾವಲಿದ್ದ ಅವರು, ಅಂದು ಕೃಷ್ಣ ಹುಣ್ಣಿಮೆ ಇದ್ದಿದ್ದರಿಂದ ಕುಟುಂಬ ಸದಸ್ಯರನ್ನು ಯಲ್ಲಮ್ಮನ ಗುಡ್ಡಕ್ಕೆ ಕಳುಹಿಸಲು ಗ್ರಾಮಕ್ಕೆ ಹೋದಾಗ, ಕಳ್ಳರು ಕೈಚಳಕ ತೋರಿಸಿದ್ದಾರೆ.