<p><strong>ಗದಗ: </strong>ಮಹಿಳೆ ತನ್ನ ಸಕಾರಾತ್ಮಕ ಪಾತ್ರದಿಂದ ಕುಟುಂಬ, ಸಮಾಜದ ಸುಧಾರಣೆ ಮಾಡಬಲ್ಲಳು ಎಂದು ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸಾಜಿದಾ ಲಾಲ್ಮಿಯಾ ಹೇಳಿದರು.<br /> <br /> ಇಲ್ಲಿನ ತಾಜ್ ನಗರದ ಹಿರಾ ಇಸ್ಲಾಮಿಕ್ ಸೆಂಟರ್ನಲ್ಲಿ ‘ಮಹಿಳೆ -ಮಾನವೀಯತೆಯ ಶಿಲ್ಪಿ’ ವಿಷಯವಾಗಿ ಏರ್ಪಡಿಸಿದ್ದ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿ, ಮಹಿಳೆ ತನ್ನ ಉನ್ನತ ವ್ಯಕ್ತಿತ್ವದ ಪ್ರಭಾವದಿಂದಾಗಿ ಕುಟುಂಬ, ಸಮಾಜವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದರು.<br /> <br /> ಧಾರವಾಡ ಜಿಲ್ಲಾ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಸಂಚಾಲಕಿ ತಾಹೀರಾ ಅಂಜುಮ್ ಮಾತನಾಡಿ, ನೈತಿಕತೆಯು ಇತ್ತೀಚಿನ ದಿನಗಳಲ್ಲಿ ಮೌಲ್ಯ ಕಳೆದುಕೊಳ್ಳುತ್ತಿದೆ, ಮಹಿಳೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಿದ್ದಾಳೆ. ಇದು ನಿಲ್ಲಬೇಕು, ಮಹಿಳೆಯರು ಜಾಗೃತರಾಗಬೇಕು ಎಂದರು.<br /> <br /> ಜಮಾತೆ ಇಸ್ಲಾಮಿ ಹಿಂದ್ ಹುಬ್ಬಳ್ಳಿಯ ಮಹಿಳಾ ಸಂಚಾಲಕಿ ಸಲ್ಮಾ ಶೇಖ, ರಾಬಿಯಾ ಯರಗಟ್ಟಿ, ಸೂಫಿಯಾ ಮುಲ್ಲಾ, ತಾಹೀರಾಬೇಗಂ ಶಿರಹಟ್ಟ ಮಾತನಾಡಿದರು. ಮುನವ್ವರ್ ಸುಲ್ತಾನಾ ಶಿರಹಟ್ಟಿ ಕುರಾನ ಪಠಿಸಿದರು. ಸೂಫಿಯಾ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜ್ವಾನಾ ಮಕಾನದಾರ ನಿರೂಪಿಸಿದರು. ಮೆಹಬೂಬಿ ಧಾರವಾಡ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಮಹಿಳೆ ತನ್ನ ಸಕಾರಾತ್ಮಕ ಪಾತ್ರದಿಂದ ಕುಟುಂಬ, ಸಮಾಜದ ಸುಧಾರಣೆ ಮಾಡಬಲ್ಲಳು ಎಂದು ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸಾಜಿದಾ ಲಾಲ್ಮಿಯಾ ಹೇಳಿದರು.<br /> <br /> ಇಲ್ಲಿನ ತಾಜ್ ನಗರದ ಹಿರಾ ಇಸ್ಲಾಮಿಕ್ ಸೆಂಟರ್ನಲ್ಲಿ ‘ಮಹಿಳೆ -ಮಾನವೀಯತೆಯ ಶಿಲ್ಪಿ’ ವಿಷಯವಾಗಿ ಏರ್ಪಡಿಸಿದ್ದ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿ, ಮಹಿಳೆ ತನ್ನ ಉನ್ನತ ವ್ಯಕ್ತಿತ್ವದ ಪ್ರಭಾವದಿಂದಾಗಿ ಕುಟುಂಬ, ಸಮಾಜವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದರು.<br /> <br /> ಧಾರವಾಡ ಜಿಲ್ಲಾ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಸಂಚಾಲಕಿ ತಾಹೀರಾ ಅಂಜುಮ್ ಮಾತನಾಡಿ, ನೈತಿಕತೆಯು ಇತ್ತೀಚಿನ ದಿನಗಳಲ್ಲಿ ಮೌಲ್ಯ ಕಳೆದುಕೊಳ್ಳುತ್ತಿದೆ, ಮಹಿಳೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಿದ್ದಾಳೆ. ಇದು ನಿಲ್ಲಬೇಕು, ಮಹಿಳೆಯರು ಜಾಗೃತರಾಗಬೇಕು ಎಂದರು.<br /> <br /> ಜಮಾತೆ ಇಸ್ಲಾಮಿ ಹಿಂದ್ ಹುಬ್ಬಳ್ಳಿಯ ಮಹಿಳಾ ಸಂಚಾಲಕಿ ಸಲ್ಮಾ ಶೇಖ, ರಾಬಿಯಾ ಯರಗಟ್ಟಿ, ಸೂಫಿಯಾ ಮುಲ್ಲಾ, ತಾಹೀರಾಬೇಗಂ ಶಿರಹಟ್ಟ ಮಾತನಾಡಿದರು. ಮುನವ್ವರ್ ಸುಲ್ತಾನಾ ಶಿರಹಟ್ಟಿ ಕುರಾನ ಪಠಿಸಿದರು. ಸೂಫಿಯಾ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜ್ವಾನಾ ಮಕಾನದಾರ ನಿರೂಪಿಸಿದರು. ಮೆಹಬೂಬಿ ಧಾರವಾಡ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>