ಈ ವೇಳೆ ಮಾತನಾಡಿದ ತಂಡದ ವಾಸುದೇವ್, ‘ಬೈಕ್ಮೂಲಕ ದೇಶದ ಎಲ್ಲಾ ಗಡಿಗಳನ್ನು ತಿರುಗಿ, ಅಮೃತಸರಕ್ಕೆ ತೆರಳಿ ದೇಶದ ಬಾವುಟ ಹಾರಿಸಲಾಗುವುದು. ಅಲ್ಲಿಂದ ಜಮ್ಮು ಕಾಶ್ಮೀರ್, ನಂತರ ಲಡಾಕ್ಗೆ ತೆರಳಲಾಗುವುದು.25 ದಿನದ ಪ್ರವಾಸದಲ್ಲಿ 15 ಜನರು 7 ಸಾವಿರ ಕಿ.ಮೀ ದೂರದ ಪ್ರಯಾಣ ಮಾಡಲಿದ್ದೇವೆ. ದೇಶದ ಗಡಿಯಲ್ಲಿ ಯೋಧರು ಇರುವ ಸ್ಥಿತಿ ಹಾಗೂ ಜೀವನ ನಡೆಸುತ್ತಿರುವ ವಿಚಾರ ತಿಳಿದು ಜನರಿಗೆ ತಿಳಿಸಲಾಗುವುದು’ ಎಂದರು.