ರಾಜ್ಯದಾದ್ಯಂತ 15 ಲಕ್ಷ ಜನಸಂಖ್ಯೆ ಇರುವ ಕೊರಮ-ಕೊರಚ ಸಮುದಾಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಜೀವನೋಪಾಯಕ್ಕಾಗಿ ಹಂದಿ ಸಾಕಾಣಿಕೆ, ಬುಟ್ಟಿ ಹೆಣೆಯುವುದು, ಹಗ್ಗ ನೇಯುವುದು, ಈಚಲು ಗರಿಗಳಿಂದ ಪೊರಕೆ ಕಟ್ಟುವುದು. ಹೀಗೆ ಇತರ ವೃತ್ತಿ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಮೂಲ ಸೌಕರ್ಯಕ್ಕಾಗಿ ನಡೆಸಿದ ನಿರಂತರ ಹೋರಾಟಕ್ಕೆ ಬೆಲೆ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.