ಡೆಮೋ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ 15 ಸಾವಿರ ಜನರ ಸಹಿ ಸಂಗ್ರಹ ಮಾಡಿ ರೈಲ್ವೆ ಸಚಿವರು ಸಂಸದರು ಶಾಸಕರಿಗೆ ಮನವಿ ಸಲ್ಲಿಸುತ್ತಿದ್ದೇನೆ. ಸಕಲೇಶಪುರದವರೆಗೆ ರೈಲು ವಿಸ್ತರಿಸಿದರೆ 2 ತಾಲ್ಲೂಕಿನ ಜನರಿಗೆ ಅನುಕೂಲ ಆಗಲಿದೆ.
ಹೇಮಂತಕುಮಾರ್ ರಾಧಮ್ಮ ಜನಸ್ಪಂದನೆ ವೇದಿಕೆ ಅಧ್ಯಕ್ಷ
ಬೆಂಗಳೂರಿನಿಂದ ಹಾಸನಕ್ಕೆ ಹೊರಡುವ ಡೆಮೋ ರೈಲು ಸಂಚಾರವನ್ನು ಸಕಲೇಶಪುರದವರೆಗೆ ವಿಸ್ತರಿಸಲು ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಮನವಿ ಮಾಡುತ್ತೇನೆ. ರೈಲು ನಿಲುಗಡೆಗೆ ಶ್ರಮಿಸುತ್ತೇನೆ.
ಶ್ರೇಯಸ್ ಪಟೇಲ್ ಸಂಸದ
ಸುರಕ್ಷಿತ ಹಾಗು ಕಡಿಮೆ ವೆಚ್ಚ ಸಂಚಾರಕ್ಕೆ ಅನುಕೂಲವಾಗುವ ಏಕೈಕ ಮಾರ್ಗ ರೈಲು. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಸಂಪರ್ಕಿಸಿ ಡೆಮೊ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಲು ಮನವಿ ಮಾಡುತ್ತೇನೆ.