ಕಾರ್ಖಾನೆ ಮಾಲೀಕರ ಮನವಿ ಮೇರೆಗೆ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸ್ನೇಕ್ ಶೇಷಪ್ಪ ಬಂದಿದ್ದರು. ಯಂತ್ರದ ಬಿಡಿಭಾಗದಲ್ಲಿ ಹಾವಿನ ಹೊಟ್ಟೆ ಸಿಲುಕಿತ್ತು. ಅದನ್ನು ಹಿಡಿದು, ದೇಹಕ್ಕೆ ಸುತ್ತಿಕೊಂಡಿದ್ದ ಕಬ್ಬಿಣವನ್ನು ಬಿಡಿಸುತ್ತಿದ್ದರು. ಈ ವೇಳೆ ಅವರ ಎಡಗೈ ಹೆಬ್ಬೆರಳಿಗೆ ಹಾವು ಕಚ್ಚಿದೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.