ಸೇತುವೆ ಕುಸಿದು ಬಿದ್ದ ಕಾರಣ ನೈಗೆರೆ– ಗರೀಘಟ್ಟ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಜಮೀನುಗಳಿಗೆ ನೀರು ನುಗ್ಗಿರುವ ಪರಿಣಾಮ ಗ್ರಾಮದ ಚಲುವೇಗೌಡ, ಲಕ್ಷ್ಮೇಗೌಡ, ತಿಮ್ಮೇಗೌಡ, ರಂಗಸ್ವಾಮಿ, ಸ್ವಾಮಿಗೌಡ, ಅಣ್ಣೇಗೌಡ ಹಾಗೂ ಇನ್ನೂ ಹಲವು ರೈತರ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ ಬೆಳೆ ಸಂಪೂರ್ಣ ಹಾಳಾಗಿದೆ.