ಇದನ್ನು ಗಮನಿಸಿದ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮಹಿಳೆಯ ಮನವೊಲಿಸಿ, ವಿಷದ ಬಾಟಲಿ ಕಿತ್ತುಕೊಂಡು ಸಮಾಧಾನಪಡಿಸಿದರು. ‘ಮಗಳನ್ನು ಪತ್ತೆ ಹಚ್ಚುವಂತೆ ಸಂಬಂಧ ಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಅಭಯ ನೀಡಿದರು. ಇಷ್ಟಕ್ಕೂ ಸಮಾಧಾನವಾಗದ ಮಹಿಳೆ, ಶಾಸಕರ ಕಾಲಿಗೆ ಬಿದ್ದು, ‘ಎಲ್ಲೇ ಇದ್ದರೂ ವಾಪಸ್ ಕರೆಸಿಕೊಡಿ’ ಎಂದು ಮನವಿ ಮಾಡಿದರು.