ಆಶೀರ್ವಚನ ನೀಡಿ ಆರ್ಯಿಕಾ ಶಿವಮತಿ ಮಾತಾಜಿ, ‘ಸರ್ವ ಜೀವಿಗಳಲ್ಲಿ ಕ್ಷಮೆಯನ್ನಿಡುವುದೇ ಕ್ಷಮಾ ಧರ್ಮ. ಮನ, ವಚನ, ಕಾಯಗಳಿಂದ ಮೋಸ ಮಾಡದಿರುವುದೇ ಆರ್ಜವ ಧರ್ಮ. ಅತಿಯಾಸೆಯನ್ನು ತ್ಯಜಿಸಿ, ಸಂತುಷ್ಟನಾಗುವ ಪ್ರವೃತ್ತಿ ಬೆಳೆಸಿಕೊಳ್ಳುವುದೇ ಶೌಚ ಧರ್ಮ. ಹಿತ, ಮಿತ, ಪ್ರಿಯ, ಸತ್ಯ ವಚನಗಳನ್ನಾಡುವುದು ಸತ್ಯ ಧರ್ಮ. ಇಂದ್ರೀಯಹಾಗೂ ಮನವನ್ನು ವಶದಲ್ಲಿಟ್ಟುಕೊಳ್ಳುವುದು ಪ್ರಾನಿ ದಯೆ ತೋರಿಸುವುದು ಸಂಯಮ ಧರ್ಮ ಹಾಗೂ ಇಂದ್ರೀಯಗಳವಿಜಯವನ್ನು ಸಾಧಿಸಿ ಆತ್ಮನಲ್ಲಿ ಲೀನವಾಗುವುದು ಬ್ರಹ್ಮಚರ್ಯ ಧರ್ಮವಾಗಿದೆ’ ಎಂದರು.