ಮೇ 11ರಂದು ಅವರನ್ನು ಬಂಧಿಸಿದ್ದ ಹೊಳೆನರಸೀಪುರ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಮೇ 24 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಶುಕ್ರವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧನದ ಅವಧಿ ವಿಸ್ತರಿಸಲಾಗಿದೆ. ಹಾಸನದ ನ್ಯಾಯಾಲಯದಲ್ಲಿ ದೇವರಾಜೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದು, ಮೇ 28ಕ್ಕೆ ವಿಚಾರಣೆ ನಡೆಯಲಿದೆ.