ಕೊಡಗಿನ ಗಡಿ ಭಾಗದ ಗ್ರಾಮಗಳಾದ ಮಾಗೋಡು, ನೆಲಬಳ್ಳಿ, ಪಾರಸನಹಳ್ಳಿ, ಮದಲಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ 8 ಆನೆಗಳ ಗುಂಪು ಜಮೀನಿಗೆ ನುಗ್ಗಿ ಭತ್ತ, ರಾಗಿ, ಕಾಫಿ, ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ನಾಶಗೊಳಿಸಿವೆ. ಕೊಳವೆ ಬಾವಿಯಿಂದ ಜಮೀನಿಗೆ ನೀರು ಹಾಯಿಸಲು ಅಳವಡಿಸಿದ್ದ ಪೈಪ್ಗಳನ್ನು ತುಳಿದು ಹಾಳು ಮಾಡಿವೆ.