<p><strong>ಸಕಲೇಶಪುರ:</strong> ಲಾರಿ, ಕಾರು, ಟೆಂಪೋ ಟ್ರ್ಯಾಕ್ಸ್ ಸೇರಿದಂತೆ ಚಾಲಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸಹಾಯಕ ಸಾರಿಗೆ ಇಲಾಖೆ ಮಾಹಿತಿ ನೀಡುವಂತೆ ಕುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಕಾರ್ಯಕರ್ತರು ಮನವಿ ಮಾಡಿದರು.</p>.<p>ಮೋಟಾರು ವೆಹಿಕಲ್ ಇನ್ಸ್ಪೆಕ್ಟರ್ ಆಗಿ ಸರ್ಕಾರದಿಂದ ನೇಮಕಗೊಂಡು ಮೊದಲ ಬಾರಿಗೆ ಇಲ್ಲಿಯ ಸಹಾಯಕ ಸಾರಿಗೆ ಇಲಾಖೆಯಲ್ಲಿ ಕರ್ತವ್ಯಕ್ಕೆ ಬಂದಿರುವ ಎನ್.ಆರ್. ಆಶಾ ಅವರಿಗೆ ಕುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ನಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಮನವಿ ಮಾಡಿದರು.</p>.<p>‘ಚಾಲಕರು ಆರ್ಥಿಕವಾಗಿ ಬಹಳ ತೊಂದರೆಯಲ್ಲಿ ಇದ್ದೇವೆ. ಸರ್ಕಾರದಿಂದ ಯಾವುದೇ ಒಂದು ಆರ್ಥಿಕ ಅಥವಾ ಇನ್ನಾವುದೇ ಸೌಲಭ್ಯಗಳು ಇದ್ದರೆ ನಮಗೆ ಅದರ ಉಪಯೋಗ ಮಾಡಿಕೊಡಿ’ ಎಂದು ಯೂನಿಯನ್ ಅಧ್ಯಕ್ಷ ವನೀನ್ ಲಾರೆನ್ಸ್ ಕೇಳಿಕೊಂಡರು.</p>.<p>‘ಲಾರಿ, ಕಾರು, ಟೆಂಪೋ ಟ್ರಾವೆಲ್ಸ್ ಸೇರಿದಂತೆ ಬಾಡಿಗೆ ವಾಹನಗಳನ್ನು ನಿಲ್ಲಿಸುವುದಕ್ಕೆ ಪಟ್ಟಣದಲ್ಲಿ ಸರಿಯಾದ ನಿಲ್ದಾಣ ವ್ಯವಸ್ಥೆಯೇ ಇಲ್ಲ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ನಿಲ್ಲಿಸಿಕೊಳ್ಳಬೇಕು. ಈ ಪ್ರದೇಶದಲ್ಲಿ ಹೆಚ್ಚು ವಾಹನಗಳನ್ನು ನಿಲ್ಲಿಸುವುದಕ್ಕೂ ಸ್ಥಳವಿಲ್ಲ. ಸಂಚಾರ ಸಮಸ್ಯೆ ಉದ್ಬವಿಸುತ್ತದೆ. ಆದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ನಿಲ್ದಾಣ ವ್ಯವಸ್ಥೆ ಮಾಡಿಕೊಡಬೇಕು’ ಎಂದರು.</p>.<p>ಸಂಘಟನಾ ಕಾರ್ಯದರ್ಶಿ ಜಿ. ಸಚಿನ್, ಸಂಘದ ಆರೀಫ್, ಹರೀಶ್ ಮಾರನಹಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ:</strong> ಲಾರಿ, ಕಾರು, ಟೆಂಪೋ ಟ್ರ್ಯಾಕ್ಸ್ ಸೇರಿದಂತೆ ಚಾಲಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸಹಾಯಕ ಸಾರಿಗೆ ಇಲಾಖೆ ಮಾಹಿತಿ ನೀಡುವಂತೆ ಕುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಕಾರ್ಯಕರ್ತರು ಮನವಿ ಮಾಡಿದರು.</p>.<p>ಮೋಟಾರು ವೆಹಿಕಲ್ ಇನ್ಸ್ಪೆಕ್ಟರ್ ಆಗಿ ಸರ್ಕಾರದಿಂದ ನೇಮಕಗೊಂಡು ಮೊದಲ ಬಾರಿಗೆ ಇಲ್ಲಿಯ ಸಹಾಯಕ ಸಾರಿಗೆ ಇಲಾಖೆಯಲ್ಲಿ ಕರ್ತವ್ಯಕ್ಕೆ ಬಂದಿರುವ ಎನ್.ಆರ್. ಆಶಾ ಅವರಿಗೆ ಕುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ನಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಮನವಿ ಮಾಡಿದರು.</p>.<p>‘ಚಾಲಕರು ಆರ್ಥಿಕವಾಗಿ ಬಹಳ ತೊಂದರೆಯಲ್ಲಿ ಇದ್ದೇವೆ. ಸರ್ಕಾರದಿಂದ ಯಾವುದೇ ಒಂದು ಆರ್ಥಿಕ ಅಥವಾ ಇನ್ನಾವುದೇ ಸೌಲಭ್ಯಗಳು ಇದ್ದರೆ ನಮಗೆ ಅದರ ಉಪಯೋಗ ಮಾಡಿಕೊಡಿ’ ಎಂದು ಯೂನಿಯನ್ ಅಧ್ಯಕ್ಷ ವನೀನ್ ಲಾರೆನ್ಸ್ ಕೇಳಿಕೊಂಡರು.</p>.<p>‘ಲಾರಿ, ಕಾರು, ಟೆಂಪೋ ಟ್ರಾವೆಲ್ಸ್ ಸೇರಿದಂತೆ ಬಾಡಿಗೆ ವಾಹನಗಳನ್ನು ನಿಲ್ಲಿಸುವುದಕ್ಕೆ ಪಟ್ಟಣದಲ್ಲಿ ಸರಿಯಾದ ನಿಲ್ದಾಣ ವ್ಯವಸ್ಥೆಯೇ ಇಲ್ಲ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ನಿಲ್ಲಿಸಿಕೊಳ್ಳಬೇಕು. ಈ ಪ್ರದೇಶದಲ್ಲಿ ಹೆಚ್ಚು ವಾಹನಗಳನ್ನು ನಿಲ್ಲಿಸುವುದಕ್ಕೂ ಸ್ಥಳವಿಲ್ಲ. ಸಂಚಾರ ಸಮಸ್ಯೆ ಉದ್ಬವಿಸುತ್ತದೆ. ಆದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ನಿಲ್ದಾಣ ವ್ಯವಸ್ಥೆ ಮಾಡಿಕೊಡಬೇಕು’ ಎಂದರು.</p>.<p>ಸಂಘಟನಾ ಕಾರ್ಯದರ್ಶಿ ಜಿ. ಸಚಿನ್, ಸಂಘದ ಆರೀಫ್, ಹರೀಶ್ ಮಾರನಹಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>