ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ’ಯುಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಹಾಗೂ ಜವಾಬ್ದಾರಿಯುತ ಬೆಳವಣಿಗೆಗಾಗಿ ರೂಪಿಸಿರುವ ಯೋಜನೆಯಾಗಿದೆ. ಮೀನು ಉತ್ಪಾದನೆಯ ನಿರ್ಣಾಯಕ ಅಂತರ ನೀಗಿಸುವುದು, ಮೂಲಭೂತ ಕಾರ್ಯಗಳ ಬಲವರ್ಧನೆ, ತಂತ್ರಜ್ಞಾನದ ಮೂಲಕ ಹಿಡುವಳಿ, ನಿರ್ವಹಣೆ ಮತ್ತು
ಅಧುನೀಕರಣ, ಮೌಲ್ಯ ಸರಪಳಿಯ ಬಲವರ್ಧನೆ ಈ ಯೋಜನೆ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.