<p><strong>ಹಾಸನ</strong>: ಉಲಿವಾಲ ಸ್ಕೂಲ್ ಆಫ್ ಡ್ರಾಮ ವತಿಯಿಂದ ನಗರದ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಿದ್ದ ರಂಗಾಯಣ ಪ್ರಸ್ತುತಿಯ ‘ಗೋರ್ ಮಾಟಿ’ ನಾಟಕವು ಯಶಸ್ವಿ ಪ್ರದರ್ಶನ ಕಂಡಿತು.</p>.<p>ಮೈಸೂರು ರಂಗಾಯಣದ ಪ್ರಸಿದ್ಧ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ನಿರ್ದೇಶನ ಮಾಡಿದ್ದ ಈ ಎರಡೂವರೆ ಗಂಟೆ ಅವಧಿಯ ನಾಟಕವನ್ನು ಹಾಸನದ ರಂಗಾಸಕ್ತ ಪ್ರೇಕ್ಷಕರು ರಂಗಾಸ್ವಾದನೆ ಮಾಡಿದರು.</p>.<p>ನಾಟಕದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿಮ್ಸ್ ನಿರ್ದೇಶಕ ಡಾ.ಸಂತೋಷ್, ಇಂತಹಾ ಅಭಿರುಚಿ ಇಂದು ಹೆಚ್ಚೆಚ್ಚು ಜನರ ನಡುವೆ ತಲುಪಬೇಕಿದೆ. ಜನರ ಮಾನಸಿಕ ಸ್ವಾಸ್ಥ್ಯಕ್ಕೆ ರಂಗಭೂಮಿ ಸಂಪೂರ್ಣ ಸಹಕಾರಿಯಾಗಲಿದೆ ಎಂದರು.</p>.<p>ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ, ಹಾಸನದಲ್ಲಿ ಮಾತ್ರವಲ್ಲದೇ ನಾಡಿನ ಬಹುತೇಕ ಕಡೆ ಉಲಿವಾಲ ಸ್ಕೂಲ್ ಆಫ್ ಡ್ರಾಮ ತಂಡವು ತಮ್ಮ ಭಿನ್ನ ರಂಗಪ್ರಯೋಗಗಳ ಮೂಲಕ ಗಮನ ಸೆಳೆದಿದೆ. ರಂಗಾಸಕ್ತರು ಈ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.</p>.<p>ರಂಗಕರ್ಮಿ ಉಲಿವಾಲ ಮೋಹನ್ ಕುಮಾರ್ ಅವರು ತಂಡದ ಆಶಯಗಳ ಕುರಿತಾಗಿ ಮಾತನಾಡಿದರು. ನಿವೃತ್ತ ತಹಸಿಲ್ದಾರ್ ರುದ್ರಪ್ಪಾಜಿರಾವ್, ಶಿಕ್ಷಕರಾದ ಸೋಮ ನಾಯಕ್, ಬಂಜಾರ ಸಮುದಾಯದ ಮುಖಂಡ ವಿಷ್ಣು ನಾಯಕ್ ಮುಂತಾದವರು ಹಾಜರಿದ್ದರು. ರಂಗಸಂಘಟಕ, ಸಾಹಿತಿ ಚಲಂ ಹಾಡ್ಲಹಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.</p>.<p><strong>ಸಂಭ್ರಮವಾದ ಗೋರ್ ಮಾಟಿ:</strong> ಎರಡೂವರೆ ಗಂಟೆಯ ‘ಗೋರ್ ಮಾಟಿ’ ನಾಟಕವು ತನ್ನ ಇಂಪಾದ ಹಾಡುಗಳಿಂದ ಹಾಗೂ ಮನಸೆಳೆಯುವ ರಂಗದೃಶ್ಯಗಳಿಂದ ಕಡೆಯ ತನಕ ಪ್ರೇಕ್ಷಕರನ್ನು ಹಿಡಿದು ಕೂರಿಸಿತು.</p>.<p>ಶಿರಗಾನಹಳ್ಳಿ ಶಾಂತನಾಯ್ ಹಾಗೂ ಬಿ.ಟಿ. ಲಲಿತಾನಾಯಕ್ ಅವರ ಕೃತಿಗಳ ಆಯ್ದ ಭಾಗಗಳನ್ನು ರಂಗದ ಮೇಲೆ ಒಂದರ ಹಿಂದೊಂದರಂತೆ ಹದವಾಗಿ ಜೋಡಿಸಿ, ನಾಟಕ ಕಟ್ಟಿದ ನಿರ್ದೇಶಕ ಸಿ.ಬಸವಲಿಂಗಯ್ಯ ಅವರ ಕಾರ್ಯವನ್ನು ಪ್ರೇಕ್ಷಕರು ಶ್ಲಾಘಿಸಿದರು.</p>.<p>ನಾಟಕದ ಕಡೆಯ ಭಾಗದಲ್ಲಿ ಚಾರ್ಲಿ ಚಾಪ್ಲಿನ್ ಅವರ ‘ದಿ ಡಿಕ್ಟೇಟರ್’ ಸಿನೆಮಾದ ಗಮನ ಸೆಳೆಯುವ ಭಾಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಅರ್ಥಪೂರ್ಣವಾಗಿತ್ತು. ಬೆಳಕು ಹಾಗೂ ರಂಗಸಜ್ಜಿಗೆ ಗಮನ ಸೆಳೆಯುವಂತಿದ್ದು, ಬಂಜಾರ ಸಮುದಾಯದ ಕಥೆಯ ಜೊತೆಗೆ ಸರಾಗವಾಗಿ ನಡೆದುಕೊಂಡು ರಂಗದ ಮೆರಗನ್ನು ಹೆಚ್ಚಿಸಿದವು.</p>.<p>ಯಶಸ್ವಿಯಾದ ಮತ್ತೆರಡು ಪ್ರಯೋಗ: ‘ಗೋರ್ ಮಾಟಿ’ ರಂಗ ಪ್ರಯೋಗದ ಜೊತೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಮತ್ತೆರಡು ಪ್ರಯೋಗಗಳು ನಡೆದವು. ಸಮಯಕ್ಕೆ ಸರಿಯಾಗಿ ನಾಟಕ ಆರಂಭಗೊಂಡಿದ್ದು ಒಂದು ಯಶಸ್ವಿ ಪ್ರಯೋಗವಾದರೆ, ನಾಟಕ ಪ್ರದರ್ಶನಕ್ಕೆ ಟಿಕೆಟ್ ದರ ನಿಗದಿ ಪಡಿಸಿ ರಂಗಾಸಕ್ತರಿಂದ ಆರ್ಥಿಕ ಸ್ಥಿರತೆ ಕಾಪಾಡಿಕೊಂಡಿದ್ದು ಮತ್ತೊಂದು ಪ್ರಯೋಗ.</p>.<p>ಈ ಎರಡೂ ಪ್ರಯೋಗದಲ್ಲಿ ಸಣ್ಣಪುಟ್ಟ ನ್ಯೂನತೆಗಳಿದ್ದರೂ, ಮುಂದಿನ ದಿನಗಳಲ್ಲಿ ರಂಗಪ್ರಯೋಗ ಮಾಡುವ ತಂಡಗಳಿಗೆ ಆತ್ಮಸ್ಥೈರ್ಯವನ್ನು ನೀಡುವಂತಿತ್ತು. ಟಿಕೆಟ್ ಶೋಗೆ ಸಹಕರಿಸಿದ ನಗರದ ರಂಗಾಸಕ್ತರಿಗೆ ಸಂಘಟಕರು ಧನ್ಯವಾದಗಳನ್ನು ಅರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಉಲಿವಾಲ ಸ್ಕೂಲ್ ಆಫ್ ಡ್ರಾಮ ವತಿಯಿಂದ ನಗರದ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಿದ್ದ ರಂಗಾಯಣ ಪ್ರಸ್ತುತಿಯ ‘ಗೋರ್ ಮಾಟಿ’ ನಾಟಕವು ಯಶಸ್ವಿ ಪ್ರದರ್ಶನ ಕಂಡಿತು.</p>.<p>ಮೈಸೂರು ರಂಗಾಯಣದ ಪ್ರಸಿದ್ಧ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ನಿರ್ದೇಶನ ಮಾಡಿದ್ದ ಈ ಎರಡೂವರೆ ಗಂಟೆ ಅವಧಿಯ ನಾಟಕವನ್ನು ಹಾಸನದ ರಂಗಾಸಕ್ತ ಪ್ರೇಕ್ಷಕರು ರಂಗಾಸ್ವಾದನೆ ಮಾಡಿದರು.</p>.<p>ನಾಟಕದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿಮ್ಸ್ ನಿರ್ದೇಶಕ ಡಾ.ಸಂತೋಷ್, ಇಂತಹಾ ಅಭಿರುಚಿ ಇಂದು ಹೆಚ್ಚೆಚ್ಚು ಜನರ ನಡುವೆ ತಲುಪಬೇಕಿದೆ. ಜನರ ಮಾನಸಿಕ ಸ್ವಾಸ್ಥ್ಯಕ್ಕೆ ರಂಗಭೂಮಿ ಸಂಪೂರ್ಣ ಸಹಕಾರಿಯಾಗಲಿದೆ ಎಂದರು.</p>.<p>ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ, ಹಾಸನದಲ್ಲಿ ಮಾತ್ರವಲ್ಲದೇ ನಾಡಿನ ಬಹುತೇಕ ಕಡೆ ಉಲಿವಾಲ ಸ್ಕೂಲ್ ಆಫ್ ಡ್ರಾಮ ತಂಡವು ತಮ್ಮ ಭಿನ್ನ ರಂಗಪ್ರಯೋಗಗಳ ಮೂಲಕ ಗಮನ ಸೆಳೆದಿದೆ. ರಂಗಾಸಕ್ತರು ಈ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.</p>.<p>ರಂಗಕರ್ಮಿ ಉಲಿವಾಲ ಮೋಹನ್ ಕುಮಾರ್ ಅವರು ತಂಡದ ಆಶಯಗಳ ಕುರಿತಾಗಿ ಮಾತನಾಡಿದರು. ನಿವೃತ್ತ ತಹಸಿಲ್ದಾರ್ ರುದ್ರಪ್ಪಾಜಿರಾವ್, ಶಿಕ್ಷಕರಾದ ಸೋಮ ನಾಯಕ್, ಬಂಜಾರ ಸಮುದಾಯದ ಮುಖಂಡ ವಿಷ್ಣು ನಾಯಕ್ ಮುಂತಾದವರು ಹಾಜರಿದ್ದರು. ರಂಗಸಂಘಟಕ, ಸಾಹಿತಿ ಚಲಂ ಹಾಡ್ಲಹಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.</p>.<p><strong>ಸಂಭ್ರಮವಾದ ಗೋರ್ ಮಾಟಿ:</strong> ಎರಡೂವರೆ ಗಂಟೆಯ ‘ಗೋರ್ ಮಾಟಿ’ ನಾಟಕವು ತನ್ನ ಇಂಪಾದ ಹಾಡುಗಳಿಂದ ಹಾಗೂ ಮನಸೆಳೆಯುವ ರಂಗದೃಶ್ಯಗಳಿಂದ ಕಡೆಯ ತನಕ ಪ್ರೇಕ್ಷಕರನ್ನು ಹಿಡಿದು ಕೂರಿಸಿತು.</p>.<p>ಶಿರಗಾನಹಳ್ಳಿ ಶಾಂತನಾಯ್ ಹಾಗೂ ಬಿ.ಟಿ. ಲಲಿತಾನಾಯಕ್ ಅವರ ಕೃತಿಗಳ ಆಯ್ದ ಭಾಗಗಳನ್ನು ರಂಗದ ಮೇಲೆ ಒಂದರ ಹಿಂದೊಂದರಂತೆ ಹದವಾಗಿ ಜೋಡಿಸಿ, ನಾಟಕ ಕಟ್ಟಿದ ನಿರ್ದೇಶಕ ಸಿ.ಬಸವಲಿಂಗಯ್ಯ ಅವರ ಕಾರ್ಯವನ್ನು ಪ್ರೇಕ್ಷಕರು ಶ್ಲಾಘಿಸಿದರು.</p>.<p>ನಾಟಕದ ಕಡೆಯ ಭಾಗದಲ್ಲಿ ಚಾರ್ಲಿ ಚಾಪ್ಲಿನ್ ಅವರ ‘ದಿ ಡಿಕ್ಟೇಟರ್’ ಸಿನೆಮಾದ ಗಮನ ಸೆಳೆಯುವ ಭಾಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಅರ್ಥಪೂರ್ಣವಾಗಿತ್ತು. ಬೆಳಕು ಹಾಗೂ ರಂಗಸಜ್ಜಿಗೆ ಗಮನ ಸೆಳೆಯುವಂತಿದ್ದು, ಬಂಜಾರ ಸಮುದಾಯದ ಕಥೆಯ ಜೊತೆಗೆ ಸರಾಗವಾಗಿ ನಡೆದುಕೊಂಡು ರಂಗದ ಮೆರಗನ್ನು ಹೆಚ್ಚಿಸಿದವು.</p>.<p>ಯಶಸ್ವಿಯಾದ ಮತ್ತೆರಡು ಪ್ರಯೋಗ: ‘ಗೋರ್ ಮಾಟಿ’ ರಂಗ ಪ್ರಯೋಗದ ಜೊತೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಮತ್ತೆರಡು ಪ್ರಯೋಗಗಳು ನಡೆದವು. ಸಮಯಕ್ಕೆ ಸರಿಯಾಗಿ ನಾಟಕ ಆರಂಭಗೊಂಡಿದ್ದು ಒಂದು ಯಶಸ್ವಿ ಪ್ರಯೋಗವಾದರೆ, ನಾಟಕ ಪ್ರದರ್ಶನಕ್ಕೆ ಟಿಕೆಟ್ ದರ ನಿಗದಿ ಪಡಿಸಿ ರಂಗಾಸಕ್ತರಿಂದ ಆರ್ಥಿಕ ಸ್ಥಿರತೆ ಕಾಪಾಡಿಕೊಂಡಿದ್ದು ಮತ್ತೊಂದು ಪ್ರಯೋಗ.</p>.<p>ಈ ಎರಡೂ ಪ್ರಯೋಗದಲ್ಲಿ ಸಣ್ಣಪುಟ್ಟ ನ್ಯೂನತೆಗಳಿದ್ದರೂ, ಮುಂದಿನ ದಿನಗಳಲ್ಲಿ ರಂಗಪ್ರಯೋಗ ಮಾಡುವ ತಂಡಗಳಿಗೆ ಆತ್ಮಸ್ಥೈರ್ಯವನ್ನು ನೀಡುವಂತಿತ್ತು. ಟಿಕೆಟ್ ಶೋಗೆ ಸಹಕರಿಸಿದ ನಗರದ ರಂಗಾಸಕ್ತರಿಗೆ ಸಂಘಟಕರು ಧನ್ಯವಾದಗಳನ್ನು ಅರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>