ಅನಾರೋಗ್ಯದಿಂದ ಅಥವಾ ಕೆಮ್ಮು ಮತ್ತು ನೆಗಡಿ ಲಕ್ಷಣ ಹೊಂದಿರುವ ಜನಗಳೊಂದಿಗೆ ನಿಕಟ ಸಂಪರ್ಕ ಹೊಂದಬೇಡಿ. ಪ್ರಾಣಿಗಳ ನೇರ ಸಂಪರ್ಕ ಹಾಗೂ ಬೇಯಿಸದ ಮಾಂಸ ಸೇವನೆ ಮಾಡಬಾರದು. ಪ್ರಾಣಿಗಳ ಸಾಕಾಣಿಕಾ ಕೇಂದ್ರಗಳು, ಮಾರಾಟ ಕೇಂದ್ರಗಳು ಅಥವಾ ಪ್ರಾಣಿಗಳ ಹತ್ಯೆ ಸ್ಥಳಗಳಿಗೆ ಹೋಗಬಾರದು. ವಿಮಾನ ನಿಲ್ದಾಣದ ವೈದ್ಯಾಧಿಕಾರಿಗಳ ಸೂಚನೆ ಪಾಲಿಸಬೇಕು.
ಈ ರೋಗಕ್ಕೆ ಲಸಿಕೆ ಇಲ್ಲ, ಲಕ್ಷಣಾಧಾರಿತ ಚಿಕೆತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.