ಸೌತೆ ಬಿತ್ತನೆಯಾದ ನಂತರ ಮೊಳಕೆಯಿಂದ ಹೂವು ಬಿಟ್ಟು ಕಾಯಿಕಟ್ಟುವವರೆಗೆ ರೋಗ, ಕೀಟಬಾಧೆ ರೈತರನ್ನು ಕಾಡುತ್ತವೆ. ಮೈಮರೆತು ಯಾವುದಾದರೂ ಒಂದು ಹಂತದಲ್ಲಿ ಔಷಧ ಸಿಂಪಡಣೆ ಮಾಡದಿದ್ದರೂ, ಬೆಳೆ ಸೊರಗುತ್ತದೆ. ಬಳ್ಳಿಯ ಬೆಳವಣಿಗೆಗೆ ಸಮಯಕ್ಕೆ ಸರಿಯಾಗಿ ಕಳೆ ತೆಗೆಯುತ್ತಿರಬೇಕು. ಪ್ರತಿ ಹಂತದಲ್ಲಿ ನಿಗಾವಹಿಸಿ ಕೆಲಸ ಮಾಡಿ ಬೆಳೆ ತೆಗೆದರೂ ಪ್ರತಿಫಲ ಇಲ್ಲದಂತಾಗಿದೆ ಎಂದು ರೈತರು ಸಮಸ್ಯೆ ಬಿಚ್ಚಿಟ್ಟರು.