ಹಾಸನ:ಮಡೆನೂರು ಕೃಷಿ ಸಂಶೋಧನಾಕೇಂದ್ರದ ವಸತಿ ಗೃಹದ ಹಿಂದೆ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಶಾಂತಿಗ್ರಾಮ ಪೋಲಿಸರು ಬಂಧಿಸಿದ್ದು, 4 ಕೆ.ಜಿ. ಹಸಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.
ಸಾರಾಪುರ ವಸತಿಗೃಹದಲ್ಲಿ ವಾಸವಿರುವ ದಿನಗೂಲಿ ನೌಕರ ಕುಮಾರ (50) ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಆಧರಿಸಿ ಶಾಂತಿಗ್ರಾಮ ಠಾಣೆಯ ಪಿಎಸ್ಐ ಕೃಷ್ಣ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.