ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಕೇಳಿ ಬಂದಿರುವ ಹಣ ಸಾಗಣೆ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ರೇವಣ್ಣ, ‘ಅವರೊಬ್ಬ ಹಿಂದುಳಿದ ವರ್ಗದ ನಾಯಕ. ಪ್ರಾಮಾಣಿಕ ಹಾಗೂ ಒಳ್ಳೆಯ ವ್ಯಕ್ತಿ. ವಿಧಾನಸೌಧದಲ್ಲಿ ಸಿಕ್ಕ ಹಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಇದರ ಹಿಂದೆ ಷಡ್ಯಂತ್ರ ಅಡಗಿದೆ. ಯಾರೋ ಒಬ್ಬರು ಹಣದ ಚೀಲ ತಂದಿಟ್ಟು ಸಚಿವರ ಹೆಸರು ಹೇಳಿದರೆ ಅದಕ್ಕೆ ಅವರೇಕೆ ಹೊಣೆಯಾಗುತ್ತಾರೆ’ ಎನ್ನುವ ಮೂಲಕ ಪುಟ್ಟರಂಗಶೆಟ್ಟಿ ಪರ ಬ್ಯಾಟಿಂಗ್ ಮಾಡಿದರು.