ಪ್ರಕರಣದ ಶಿಕ್ಷಕ ನಿರ್ವಾಣಪ್ಪ ಅಮಾನತ್ತಿಗೆ ಕೆಎಟಿ ತಡೆಯಾಜ್ಞೆ ನೀಡಿದ್ದರಿಂದ ಅದೇ ಶಾಲೆಗೆ ಪುನಃ ಕರ್ತವ್ಯಕ್ಕೆ ಬರುವುದನ್ನು ಗ್ರಾಮಸ್ಥರು ವಿರೋಧಿಸಿ ಬಿಇಒ ಕಚೇರಿ ಮುಂದೆ ಧರಣಿ ನಡೆಸಿದ್ದರು. ಶಿಕ್ಷಕ ಪುನಃ ಕರ್ತವ್ಯಕ್ಕೆ ಬರುವುದನ್ನು ವಿರೋಧಿಸಿ 23 ವಿದ್ಯಾರ್ಥಿಗಳನ್ನುಪೋಷಕರು ಶಾಲೆಗೆ ಕಳುಹಿಸದೆ ಗ್ರಾಮದ ಮನೆಯೊಂದರಲ್ಲಿ ಪೋಷಕರೇ ಪಾಠ ಮಾಡಿ ಬಿಸಿಯೂಟ ನೀಡುತ್ತಿದ್ದರು. ಸಮಸ್ಯೆ ಉಲ್ಬಣಿಸುವ ಬೆಳವಣಿಗೆ ಗಮನಿಸಿ ಬಿಇಒ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪೋಷಕರು, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಹಾಗೂ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಎಲ್ಲಾ ಮಕ್ಕಳು ಶಾಲೆಗೆ ಬರುವಂತೆ ಮನವೊಲಿಸಿದ್ದಾರೆ.