ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶನಿವಾರ ಒಂದು ಗಂಟೆಗೂ ಹೆಚ್ಚು ಕಾಲ ರಭಸದ ಮಳೆಯಾಯಿತು.
ಸಂಜೆ 5.45ಕ್ಕೆ ಗುಡುಗು ಸಹಿತ ಜೋರಾಗಿ ಮಳೆ ಬಿತ್ತು. ತಗ್ಗು ಪ್ರದೇಶವಾದ ರೇಣುಕಾಂಬಾ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ಹರಿಯಿತು. ಅಲ್ಲದೇ ಚರಂಡಿ ಮುಚ್ಚಿಕೊಂಡಿದ್ದರಿಂದ ಕೆಲ ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿ ಅವಾಂತರವಾಯಿತು.
ಮಾಧ್ಯಮಿಕ, ಶಾಲಾ ಆವರಣದಲ್ಲಿ ನೀರು ನಿಂತಿತ್ತು. ಬಾಗೂರು ರಸ್ತೆ, ಬಿ.ಎಂ. ರಸ್ತೆಯಲ್ಲಿ ಮಳೆಯ ನೀರು ಹರಿಯಿತು.
ರೇಣುಕಾಂಬಾ ರಸ್ತೆಯಲ್ಲಿ ಅಂಗಡಿಗಳ ಮುಂದೆ ರಿಪೇರಿ ಮಾಡಲು ಇಟ್ಟಿದ ಟಿ.ವಿ. ಮಳೆಯ ನೀರಿನಲ್ಲಿ ರಸ್ತೆಯಲ್ಲಿ ತೇಲಿ ಬಂತು ಎಂದು ಸಮಾಜ ಸೇವಕ ಸಿ.ಟಿ. ಕುಮಾರಸ್ವಾಮಿ ತಿಳಿಸಿದರು.