ಆನೆ ಮರಿ ತಾಯಿಯಿಂದ ಪರಿತ್ಯಕ್ತವಾಗಿ ಗುಂಡಿಗೆ ಸಿಲುಕಿ ಮುಂಗಾಲು ಮುರಿದಿತ್ತು. ಹಾಸನ ಮತ್ತು ತುಮಕೂರು ಜಿಲ್ಲೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಮುರಳಿ ಮತ್ತು ತಂಡದವರು ಆನೆಯ ಆರೋಗ್ಯ ಪರೀಕ್ಷಿಸಿದರು. ಮುಂಭಾಗದ ಎಡಗಾಲಿಗೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಎಕ್ಸ್ರೆ, ರಕ್ತದ ಮಾದರಿ ಪರೀಕ್ಷೆ ಮಾಡಲಾಯಿತು. ಡ್ರಿಪ್ ಹಾಕಿ, ಬಾಟಲಿಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಲಾಗಿದೆ.