ಈ ಶಾಲೆಯ ಕಟ್ಟಡವು ತುಂಬಾ ಹಳೆಯದಾಗಿ, ಮಂಗಳೂರು ಹೆಂಚಿನಿಂದ ಕೂಡಿದ್ದು, ಗೆದ್ದಲು ಹಿಡಿದಿದೆ. ಮಳೆ ಮತ್ತು ಗಾಳಿಗೆ ಹೆಂಚುಗಳು ಒಡೆದು ಕೆಲವು ಕಡೆಗಳಲ್ಲಿ ಹಾರಿ ಹೋಗಿದ್ದರಿಂದ, ಗೋಡೆಗಳು, ತೀರು, ರೀಪರ್ ನೆನೆದು ಶಿಥಿಲವಾಗಿತವೆ. ಹಾಗಾಗಿ ತರಗತಿಗಳು ನಡೆಯುವುದಕ್ಕೆ ಅನಾನುಕೂಲವಾಗಿದೆ ಎಂದು ಇಲ್ಲಿಯ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಕೆ.ರಘು ಅಸಾಮಧಾನ ವ್ಯಕ್ತಪಡಿಸಿದರು.