<p><strong>ಹಾಸನ:</strong> ‘ನಮ್ಮ ದೇಶದವರಿಗೆ ಅನ್ಯಾಯ ಆಗಿದೆ. ಆ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಬೇಕಲ್ಲವೇ? ಆ ಕೆಲಸ ನಾವು ಮಾಡುತ್ತಿದ್ದೇವೆ. ಇದನ್ನು ವಿರೋಧ ಮಾಡುವ ಕಾಂಗ್ರೆಸ್ನ ಮನಸ್ಥಿತಿ ಏನು ಎನ್ನುವುದು ಜನರಿಗೆ ಅರ್ಥವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.</p>.<p>ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲಿ ಹಾಕಿದರೆ, ‘ಹೊರಗಡೆ ಇರುವ ಕಳ್ಳ ಒಳಗೆ ಬರುವುದಿಲ್ಲ. ಅಂದರೆ ಒಳಗಿರುವವನು ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ಈಗ ಹೊರಗಡೆ ನಡೆಯುತ್ತಿರುವ ಕಾರ್ಯಾಚರಣೆ ಒಳಗೂ ಆಗುತ್ತದೆ. ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದರು.</p>.<p>‘ನಮ್ಮಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳು ಪಾಕಿಸ್ತಾನದಿಂದಲೇ ಆಗುತ್ತಿವೆ ಎನ್ನುವುದು ಸಾಬೀತಾಗಿದೆ. ಒಂಬತ್ತು ಸ್ಥಳಗಳಿಗೆ ನುಗ್ಗಿ ಹೊಡೆಯುವ ಕೆಲಸವನ್ನು ಮೋದಿ ಮಾಡಿದರು. ಪುಲ್ವಾಮದಲ್ಲಿ 48 ಸೈನಿಕರು ಸತ್ತಿದ್ದರು. ಪಾಕಿಸ್ತಾನದವರು ನಮಗೆ ಸಂಬಂಧ ಇಲ್ಲ ಎಂದು ಹೇಳಿದ್ದರು. ಈಗ ಏಕೆ ಒಪ್ಪಿಕೊಂಡರು’ ಎಂದು ಪ್ರಶ್ನಿಸಿದರು.</p>.<p>‘ಕಾಶ್ಮೀರ, ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗೊಂದಲ ಹುಟ್ಟುಹಾಕಿದ್ದೇ ಕಾಂಗ್ರೆಸ್ನವರು. ಇಂದಿರಾಗಾಂಧಿ ಅವರನ್ನು ಬಹಳ ಹೊಗಳುತ್ತಾರೆ. 1971 ರಲ್ಲಿ ನಮ್ಮ ಮೇಲೆ ಯಾರೂ ಯುದ್ದಕ್ಕೆ ಬಂದಿರಲಿಲ್ಲ. ಪಾಕಿಸ್ತಾನ- ಬಾಂಗ್ಲಾದೇಶದ ನಡುವೆ ಯುದ್ಧ ನಡೆಯುತ್ತಿತ್ತು. ಒಬ್ಬನೇ ವೈರಿ ಇದ್ದವನನ್ನು ಇಬ್ಬರು ಮಾಡಿ, ನಮ್ಮ ಮೇಲೆ ಬಿಟ್ಟಿದ್ದೀರಿ. ಇದು ಕಾಂಗ್ರೆಸ್ ಮಾಡಿರುವ ದ್ರೋಹ. ಭಾರತದಲ್ಲಿ ಅನೇಕ ಸಮಸ್ಯೆಗಳು ಉದ್ಭವಾಗಿರುವುದು ಕಾಂಗ್ರೆಸ್ನಿಂದಲೇ. ನಾವು ಆ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಬೇಕಿದ್ದು, ಮಾಡುತ್ತಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ‘ನಮ್ಮ ದೇಶದವರಿಗೆ ಅನ್ಯಾಯ ಆಗಿದೆ. ಆ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಬೇಕಲ್ಲವೇ? ಆ ಕೆಲಸ ನಾವು ಮಾಡುತ್ತಿದ್ದೇವೆ. ಇದನ್ನು ವಿರೋಧ ಮಾಡುವ ಕಾಂಗ್ರೆಸ್ನ ಮನಸ್ಥಿತಿ ಏನು ಎನ್ನುವುದು ಜನರಿಗೆ ಅರ್ಥವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.</p>.<p>ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲಿ ಹಾಕಿದರೆ, ‘ಹೊರಗಡೆ ಇರುವ ಕಳ್ಳ ಒಳಗೆ ಬರುವುದಿಲ್ಲ. ಅಂದರೆ ಒಳಗಿರುವವನು ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ಈಗ ಹೊರಗಡೆ ನಡೆಯುತ್ತಿರುವ ಕಾರ್ಯಾಚರಣೆ ಒಳಗೂ ಆಗುತ್ತದೆ. ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದರು.</p>.<p>‘ನಮ್ಮಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳು ಪಾಕಿಸ್ತಾನದಿಂದಲೇ ಆಗುತ್ತಿವೆ ಎನ್ನುವುದು ಸಾಬೀತಾಗಿದೆ. ಒಂಬತ್ತು ಸ್ಥಳಗಳಿಗೆ ನುಗ್ಗಿ ಹೊಡೆಯುವ ಕೆಲಸವನ್ನು ಮೋದಿ ಮಾಡಿದರು. ಪುಲ್ವಾಮದಲ್ಲಿ 48 ಸೈನಿಕರು ಸತ್ತಿದ್ದರು. ಪಾಕಿಸ್ತಾನದವರು ನಮಗೆ ಸಂಬಂಧ ಇಲ್ಲ ಎಂದು ಹೇಳಿದ್ದರು. ಈಗ ಏಕೆ ಒಪ್ಪಿಕೊಂಡರು’ ಎಂದು ಪ್ರಶ್ನಿಸಿದರು.</p>.<p>‘ಕಾಶ್ಮೀರ, ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗೊಂದಲ ಹುಟ್ಟುಹಾಕಿದ್ದೇ ಕಾಂಗ್ರೆಸ್ನವರು. ಇಂದಿರಾಗಾಂಧಿ ಅವರನ್ನು ಬಹಳ ಹೊಗಳುತ್ತಾರೆ. 1971 ರಲ್ಲಿ ನಮ್ಮ ಮೇಲೆ ಯಾರೂ ಯುದ್ದಕ್ಕೆ ಬಂದಿರಲಿಲ್ಲ. ಪಾಕಿಸ್ತಾನ- ಬಾಂಗ್ಲಾದೇಶದ ನಡುವೆ ಯುದ್ಧ ನಡೆಯುತ್ತಿತ್ತು. ಒಬ್ಬನೇ ವೈರಿ ಇದ್ದವನನ್ನು ಇಬ್ಬರು ಮಾಡಿ, ನಮ್ಮ ಮೇಲೆ ಬಿಟ್ಟಿದ್ದೀರಿ. ಇದು ಕಾಂಗ್ರೆಸ್ ಮಾಡಿರುವ ದ್ರೋಹ. ಭಾರತದಲ್ಲಿ ಅನೇಕ ಸಮಸ್ಯೆಗಳು ಉದ್ಭವಾಗಿರುವುದು ಕಾಂಗ್ರೆಸ್ನಿಂದಲೇ. ನಾವು ಆ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಬೇಕಿದ್ದು, ಮಾಡುತ್ತಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>