<p><strong>ಹಾಸನ</strong>: ಯಾವುದೇ ತರಕಾರಿಗಳು ಆರೋಗ್ಯಕರವಾಗಿ ಬೆಳೆಯಬೇಕಾದರೆ ಮಣ್ಣಿನ ಸತ್ವ ಬಹಳ ಮುಖ್ಯವಾದದ್ದು. ಸಗಣಿ ಗೊಬ್ಬರ, ಎರೆಹುಳು ಗೊಬ್ಬರ, ಪಂಚಗವ್ಯ ಇತ್ಯಾದಿಗಳಿಂದ ತರಕಾರಿಗಳನ್ನು ಚೆನ್ನಾಗಿ ಬೆಳೆದುಕೊಳ್ಳಬಹುದು ಎಂದು 86 ವರ್ಷದ ಎಂ.ಕೆ. ಕೃಷ್ಣಪ್ಪ ಸಲಹೆ ನೀಡಿದರು.</p>.<p>ನಗರದ ಕೆ.ಆರ್. ಪುರಂನ ರೆಡ್ ರೋಸ್ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪುಣ್ಯಭೂಮಿ ಮತ್ತು ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಸಿರ ಸಿಂಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಮಣ್ಣಿನಲ್ಲಿ ಜೀವ ಇದೆ. ಸಸ್ಯಗಳಲ್ಲೂ ಸಂವೇದನೆ ಇದೆ. ನಾವು ಪ್ರೀತಿಯಿಂದ ತೊಡಗಿಸಿಕೊಂಡಾಗ ಅದರ ಪ್ರತಿಫಲವೇ ಬೇರೆ. ಮಣ್ಣಿನ ಸತ್ವ ಉತ್ತಮವಾಗಿದ್ದರೆ ತರಕಾರಿಗಳಿಗೆ ವಿಷಗಳನ್ನು ಸಿಂಪಡಿಸುವ ಅಗತ್ಯವಿಲ್ಲ ಎಂದರು.</p>.<p>ಆತಿಥ್ಯ ವಹಿಸಿ ಮಾತನಾಡಿದ ಪ್ರಗತಿಪರ ರೈತ ಮಹಿಳೆ ಹೇಮಾ ಅನಂತ್, ನಗರವಾಸಿಗಳು ತಮ್ಮ ಮನೆಯ ತ್ಯಾಜ್ಯವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು ಮನೆಗಳ ಆಸುಪಾಸಿನಲ್ಲಿ ವಿಭಿನ್ನವಾದ ತರಕಾರಿಗಳನ್ನು ಜೈವಿಕ ಪದ್ಧತಿಯಲ್ಲಿ ಬೆಳೆದುಕೊಳ್ಳಬಹುದು ಎಂದು ಹೇಳಿದರು.</p>.<p>ನಾನು ನಮ್ಮ ಮನೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಎಂದೂ ಕಸದ ವಾಹನಗಳಿಗೆ ಹಾಕಿಲ್ಲ. ಬದಲಿಗೆ ನಮ್ಮ ಜಾಗದಲ್ಲೇ ಅದನ್ನೆಲ್ಲಾ ಕರಗಿಸಿ, ಸದುಪಯೋಗ ಮಾಡಿಕೊಳ್ಳುತ್ತಿರುವೆ. ಗಿಡಗಳಿಗೆ ಹಾಲು, ಮಜ್ಜಿಗೆ, ಅಕ್ಕಿ ಗಂಜಿ ಇತ್ಯಾದಿಗಳನ್ನು ಸಿಂಪಡಿಸಿ ಉತ್ತಮವಾದ ಪರಿಣಾಮಗಳನ್ನು ಕಂಡಿದ್ದೇನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.</p>.<p>86ನೇ ವರ್ಷದಲ್ಲೂ ಲವಲವಿಕೆಯಿಂದ ಕೃಷಿ ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ತಮ್ಮ ತಂದೆ ಎಂ.ಕೆ. ಕೃಷ್ಣಪ್ಪ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು.</p>.<p>ಪುಣ್ಯಭೂಮಿ ಸಂಸ್ಥೆಯ ಮುಖ್ಯಸ್ಥ ಡಾ. ವಿಜಯ್ ಅಂಗಡಿ ಮಾತನಾಡಿ, ನಿತ್ಯವೂ ಪ್ರತಿಯೊಬ್ಬರೂ ಸಸ್ಯಗಳ ಪೋಷಣೆಯಲ್ಲಿ ತೊಡಗಿಸಿಕೊಂಡಾಗ ಜೀವನ ಉಲ್ಲಾಸವಾಗಿರುತ್ತದೆ. ಮನೆಗಳ ಆಸುಪಾಸು ಮತ್ತು ಮನೆಯ ತಾರಸಿಯಲ್ಲಿ ಪ್ರತಿಯೊಬ್ಬರೂ ತರಕಾರಿ, ಹೂವು, ಔಷಧೀಯ ಸಸ್ಯಗಳನ್ನು ಬೆಳೆದುಕೊಳ್ಳಬಹುದು. ಜೇನನ್ನೂ ಸಾಕಿಕೊಳ್ಳಬಹುದು ಎಂದು ತಿಳಿಸಿದರು.</p>.<p>ಲಯನ್ಸ್ ಸಂಸ್ಥೆಯ ಚಂದ್ರೇಗೌಡ, ರಮೇಶ್, ಶಿವಸ್ವಾಮಿ, ಶಿವೇಗೌಡ, ಮಾಲತೇಶ್, ಕುಮಾರಸ್ವಾಮಿ, ವೆಂಕಟೇಗೌಡ, ಪುಟ್ಟಮ್ಮ, ಬಾಲಕೃಷ್ಣ, ಅನಂತ್, ಗಿರಿಜಾಂಬಿಕಾ ಮುಂತಾದವರು ಪಾಲ್ಗೊಂಡಿದ್ದರು.</p>.<p>ಪ್ರಗತಿಪರ ಕೃಷಿಕ ಜಿ.ಎಸ್. ಗಿಡ್ಡೇಗೌಡರು ತಮ್ಮ ತೋಟದಲ್ಲಿ ಬೆಳೆದಿದ್ದ ಬಳ್ಳಿ ಆಲೂಗಡ್ಡೆ, ಮಾಂಗಾಯಿ ಶುಂಠಿ, ಕೋಕೋ ಬೀಜ ಇತ್ಯಾದಿಗಳನ್ನು ತಂದಿದ್ದರು. ಬಂದವರು ಜೈವಿಕ ಉತ್ಪನ್ನಗಳನ್ನು ಪಡೆದುಕೊಂಡರು. ಹೇಮಾ ಅನಂತ್ ಅವರು ಬೆಳೆದಿರುವ ಹತ್ತಾರು ಬಗೆಯ ತರಕಾರಿಗಳನ್ನು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಯಾವುದೇ ತರಕಾರಿಗಳು ಆರೋಗ್ಯಕರವಾಗಿ ಬೆಳೆಯಬೇಕಾದರೆ ಮಣ್ಣಿನ ಸತ್ವ ಬಹಳ ಮುಖ್ಯವಾದದ್ದು. ಸಗಣಿ ಗೊಬ್ಬರ, ಎರೆಹುಳು ಗೊಬ್ಬರ, ಪಂಚಗವ್ಯ ಇತ್ಯಾದಿಗಳಿಂದ ತರಕಾರಿಗಳನ್ನು ಚೆನ್ನಾಗಿ ಬೆಳೆದುಕೊಳ್ಳಬಹುದು ಎಂದು 86 ವರ್ಷದ ಎಂ.ಕೆ. ಕೃಷ್ಣಪ್ಪ ಸಲಹೆ ನೀಡಿದರು.</p>.<p>ನಗರದ ಕೆ.ಆರ್. ಪುರಂನ ರೆಡ್ ರೋಸ್ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪುಣ್ಯಭೂಮಿ ಮತ್ತು ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಸಿರ ಸಿಂಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಮಣ್ಣಿನಲ್ಲಿ ಜೀವ ಇದೆ. ಸಸ್ಯಗಳಲ್ಲೂ ಸಂವೇದನೆ ಇದೆ. ನಾವು ಪ್ರೀತಿಯಿಂದ ತೊಡಗಿಸಿಕೊಂಡಾಗ ಅದರ ಪ್ರತಿಫಲವೇ ಬೇರೆ. ಮಣ್ಣಿನ ಸತ್ವ ಉತ್ತಮವಾಗಿದ್ದರೆ ತರಕಾರಿಗಳಿಗೆ ವಿಷಗಳನ್ನು ಸಿಂಪಡಿಸುವ ಅಗತ್ಯವಿಲ್ಲ ಎಂದರು.</p>.<p>ಆತಿಥ್ಯ ವಹಿಸಿ ಮಾತನಾಡಿದ ಪ್ರಗತಿಪರ ರೈತ ಮಹಿಳೆ ಹೇಮಾ ಅನಂತ್, ನಗರವಾಸಿಗಳು ತಮ್ಮ ಮನೆಯ ತ್ಯಾಜ್ಯವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು ಮನೆಗಳ ಆಸುಪಾಸಿನಲ್ಲಿ ವಿಭಿನ್ನವಾದ ತರಕಾರಿಗಳನ್ನು ಜೈವಿಕ ಪದ್ಧತಿಯಲ್ಲಿ ಬೆಳೆದುಕೊಳ್ಳಬಹುದು ಎಂದು ಹೇಳಿದರು.</p>.<p>ನಾನು ನಮ್ಮ ಮನೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಎಂದೂ ಕಸದ ವಾಹನಗಳಿಗೆ ಹಾಕಿಲ್ಲ. ಬದಲಿಗೆ ನಮ್ಮ ಜಾಗದಲ್ಲೇ ಅದನ್ನೆಲ್ಲಾ ಕರಗಿಸಿ, ಸದುಪಯೋಗ ಮಾಡಿಕೊಳ್ಳುತ್ತಿರುವೆ. ಗಿಡಗಳಿಗೆ ಹಾಲು, ಮಜ್ಜಿಗೆ, ಅಕ್ಕಿ ಗಂಜಿ ಇತ್ಯಾದಿಗಳನ್ನು ಸಿಂಪಡಿಸಿ ಉತ್ತಮವಾದ ಪರಿಣಾಮಗಳನ್ನು ಕಂಡಿದ್ದೇನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.</p>.<p>86ನೇ ವರ್ಷದಲ್ಲೂ ಲವಲವಿಕೆಯಿಂದ ಕೃಷಿ ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ತಮ್ಮ ತಂದೆ ಎಂ.ಕೆ. ಕೃಷ್ಣಪ್ಪ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು.</p>.<p>ಪುಣ್ಯಭೂಮಿ ಸಂಸ್ಥೆಯ ಮುಖ್ಯಸ್ಥ ಡಾ. ವಿಜಯ್ ಅಂಗಡಿ ಮಾತನಾಡಿ, ನಿತ್ಯವೂ ಪ್ರತಿಯೊಬ್ಬರೂ ಸಸ್ಯಗಳ ಪೋಷಣೆಯಲ್ಲಿ ತೊಡಗಿಸಿಕೊಂಡಾಗ ಜೀವನ ಉಲ್ಲಾಸವಾಗಿರುತ್ತದೆ. ಮನೆಗಳ ಆಸುಪಾಸು ಮತ್ತು ಮನೆಯ ತಾರಸಿಯಲ್ಲಿ ಪ್ರತಿಯೊಬ್ಬರೂ ತರಕಾರಿ, ಹೂವು, ಔಷಧೀಯ ಸಸ್ಯಗಳನ್ನು ಬೆಳೆದುಕೊಳ್ಳಬಹುದು. ಜೇನನ್ನೂ ಸಾಕಿಕೊಳ್ಳಬಹುದು ಎಂದು ತಿಳಿಸಿದರು.</p>.<p>ಲಯನ್ಸ್ ಸಂಸ್ಥೆಯ ಚಂದ್ರೇಗೌಡ, ರಮೇಶ್, ಶಿವಸ್ವಾಮಿ, ಶಿವೇಗೌಡ, ಮಾಲತೇಶ್, ಕುಮಾರಸ್ವಾಮಿ, ವೆಂಕಟೇಗೌಡ, ಪುಟ್ಟಮ್ಮ, ಬಾಲಕೃಷ್ಣ, ಅನಂತ್, ಗಿರಿಜಾಂಬಿಕಾ ಮುಂತಾದವರು ಪಾಲ್ಗೊಂಡಿದ್ದರು.</p>.<p>ಪ್ರಗತಿಪರ ಕೃಷಿಕ ಜಿ.ಎಸ್. ಗಿಡ್ಡೇಗೌಡರು ತಮ್ಮ ತೋಟದಲ್ಲಿ ಬೆಳೆದಿದ್ದ ಬಳ್ಳಿ ಆಲೂಗಡ್ಡೆ, ಮಾಂಗಾಯಿ ಶುಂಠಿ, ಕೋಕೋ ಬೀಜ ಇತ್ಯಾದಿಗಳನ್ನು ತಂದಿದ್ದರು. ಬಂದವರು ಜೈವಿಕ ಉತ್ಪನ್ನಗಳನ್ನು ಪಡೆದುಕೊಂಡರು. ಹೇಮಾ ಅನಂತ್ ಅವರು ಬೆಳೆದಿರುವ ಹತ್ತಾರು ಬಗೆಯ ತರಕಾರಿಗಳನ್ನು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>