<p>ರಾಮನಾಥಪುರ: ಸಂಗೀತ ಕಲಾ ಗ್ರಾಮವೆಂದು ಪ್ರಸಿದ್ಧಿ ಹೊಂದಿರುವ ಅರಕಲಗೂಡು ತಾಲ್ಲೂಕು ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಹಲವು ಮೇರು ಕಲಾವಿದರನ್ನು ಕೊಟ್ಟಿದೆ.<br /> <br /> ಈ ಗ್ರಾಮ ಪೋಷಿಸಿ ಬೆಳಸಿದ ಅನೇಕ ಕಲಾವಿದರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಆದರೆ, ಗ್ರಾಮದ ಜನರಿಗೆ ಮಾತ್ರ ಸರಿಯಾದ ಆರೋಗ್ಯ ಕೇಂದ್ರವಿಲ್ಲದೇ ಪ್ರತಿನಿತ್ಯ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.<br /> <br /> ರುದ್ರಪಟ್ಟಣದಲ್ಲಿ 600ಕ್ಕೂ ಹೆಚ್ಚು ಮನೆ, ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇರುವ 600 ಮನೆಗಳಲ್ಲಿ 300 ಮನೆಗಳಿಗೆ ಮಾತ್ರ ಶೌಚಾಲಯವಿದೆ. ಉಳಿದವರು ಬಹಿರ್ದೆಸೆಗೆ ಹೊಲ ಅಥವಾ ತೋಟಗಳನ್ನು ಅವಲಂಬಿಸಿದ್ದಾರೆ.<br /> <br /> ಭಣಗುಡುತ್ತಿರುವ ಆರೋಗ್ಯ ಕೇಂದ್ರ: ಗ್ರಾಮದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಪ್ರತಿ ನಿತ್ಯ 50 ರಿಂದ 60 ರೋಗಿಗಳು ಬರುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ವೈದ್ಯರು ಲಭಿಸದೆ ರೋಗಿಗಳು ಸುಮಾರು 8 ಕಿ.ಮೀ. ದೂರದ ಹೋಬಳಿ ಕೇಂದ್ರಗಳಾದ ರಾಮನಾಥಪುರ ಅಥವಾ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.<br /> <br /> ವಾರದಲ್ಲಿ 5 ದಿನ ಮಾತ್ರ ವೈದ್ಯರು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಉಳಿದ ದಿನಗಳಲ್ಲಿ ಕಾಯಿಲೆಗೆ ತುತ್ತಾಗುವವರ ಗೋಳು ಕೇಳುವವರಿಲ್ಲ. 5 ದಿನ ಬರುವ ವೈದ್ಯರು ಸಹ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ದೂರುತ್ತಾರೆ ರೋಗಿಗಳು.<br /> <br /> ಇದರಿಂದ ಗರ್ಭಿಣಿಯರು ಮತ್ತು ವೃದ್ಧರಿಗೆ ತುಂಬ ತೊಂದರೆಯಾಗುತ್ತಿದೆ. ಈ ಆಸ್ಪತ್ರೆಗೆ ಹೊಂದಿಕೊಂಡಂತೆ ಹನ್ಯಾಳು, ಲಕ್ಕೂರು, ರಾಗಿಮರೂರು, ಸೋಂಪುರ, ಮತ್ತಿಗೋಡು, ವಡ್ಡರಹಳ್ಳಿ, ಮಧುರನಹಳ್ಳಿ, ಆನಂದೂರು ಗ್ರಾಮಸ್ಥರಿಗೂ ಸಹ ತೊಂದರೆಯಾಗಿದೆ.<br /> <br /> ಕಾಮಗಾರಿ ಸ್ಥಗಿತ: ಈಗಿರುವ ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿ 2–3 ವರ್ಷ ಕಳೆಯುತ್ತಿದ್ದರೂ, ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಕಟ್ಟಡಕ್ಕಾಗಿ ಸರ್ಕಾರದಿಂದ ₨ 1 ಕೋಟಿ ಅನುದಾನ ಸಿಕ್ಕಿದೆ. ಇದರ ಜತೆಗೆ ಗ್ರಾಮಸ್ಥರಿಂದ ವಂತಿಗೆಯ ರೂಪದಲ್ಲಿ ₨ 1 ಲಕ್ಷ ಹಣವನ್ನು ಸಂಗ್ರಹಿಸಿ 20 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಜಮಾ ಮಾಡಲಾಗಿದೆ.<br /> <br /> ಇಷ್ಟೆಲ್ಲಾ ಹಣ ಬಿಡುಗಡೆ ಆದರೂ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರಿಗೆ ಅರಗಿಸಿಕೊಳ್ಳಲಾಗದ ಸಮಸ್ಯೆಯಾಗಿದೆ. ಕಾಮಗಾರಿ ಪಡೆದ ಗುತ್ತಿಗೆದಾರರನ್ನು ಗ್ರಾಮಸ್ಥರು ಪ್ರಶ್ನಿಸಿದಾಗ, ‘ಇಲ್ಲಿಯವರೆಗೆ ಮಾಡಿರುವ ಕಾಮಗಾರಿಯ ಹಣ ಬಂದಿಲ್ಲ ಅದಕ್ಕಾಗಿ ಕೆಲಸ ನಿಲ್ಲಿಸಲಾಗಿದೆ’ ಎನ್ನುತ್ತಾರೆ ಎಂದು ಗ್ರಾಮಸ್ಥರು ದೂರಿದರು.<br /> <br /> ವಾರಸುದಾರರಿಲ್ಲದ ಸರ್ಕಾರಿ ಕಟ್ಟಡಗಳು: ಸುಮಾರು 40 ವರ್ಷಗಳ ಹಿಂದೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸರ್ಕಾರಿ ನೌಕರರಿಗೆಂದು ನಾಲ್ಕು ವಸತಿ ನಿಲಯಗಳನ್ನು ನಿರ್ಮಿಸಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಯಾವ ಇಲಾಖೆಯ ನೌಕರರೂ ಈ ಕಟ್ಟಡದಲ್ಲಿ ವಾಸ ಮಾಡಿಲ್ಲ. ಇದರಿಂದಾಗಿ ಕಟ್ಟಡಗಳು ಪಾಳುಬಿದ್ದು, ಹಾವು ಹಲ್ಲಿಗಳ ವಾಸ ಸ್ಥಾನವಾಗಿವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದೇಗೌಡ.<br /> <br /> ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಿ ಮತ್ತು ನೂತನ ಕಟ್ಟಡದ ಕಾಮಗಾರಿ ಮುಗಿಸಿ ಲೋಕರ್ಪಣೆಯಾಗಲಿ ಎಂಬ ಆಶಯ ಇಲ್ಲಿನ ಗ್ರಾಮಸ್ಥರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮನಾಥಪುರ: ಸಂಗೀತ ಕಲಾ ಗ್ರಾಮವೆಂದು ಪ್ರಸಿದ್ಧಿ ಹೊಂದಿರುವ ಅರಕಲಗೂಡು ತಾಲ್ಲೂಕು ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಹಲವು ಮೇರು ಕಲಾವಿದರನ್ನು ಕೊಟ್ಟಿದೆ.<br /> <br /> ಈ ಗ್ರಾಮ ಪೋಷಿಸಿ ಬೆಳಸಿದ ಅನೇಕ ಕಲಾವಿದರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಆದರೆ, ಗ್ರಾಮದ ಜನರಿಗೆ ಮಾತ್ರ ಸರಿಯಾದ ಆರೋಗ್ಯ ಕೇಂದ್ರವಿಲ್ಲದೇ ಪ್ರತಿನಿತ್ಯ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.<br /> <br /> ರುದ್ರಪಟ್ಟಣದಲ್ಲಿ 600ಕ್ಕೂ ಹೆಚ್ಚು ಮನೆ, ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇರುವ 600 ಮನೆಗಳಲ್ಲಿ 300 ಮನೆಗಳಿಗೆ ಮಾತ್ರ ಶೌಚಾಲಯವಿದೆ. ಉಳಿದವರು ಬಹಿರ್ದೆಸೆಗೆ ಹೊಲ ಅಥವಾ ತೋಟಗಳನ್ನು ಅವಲಂಬಿಸಿದ್ದಾರೆ.<br /> <br /> ಭಣಗುಡುತ್ತಿರುವ ಆರೋಗ್ಯ ಕೇಂದ್ರ: ಗ್ರಾಮದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಪ್ರತಿ ನಿತ್ಯ 50 ರಿಂದ 60 ರೋಗಿಗಳು ಬರುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ವೈದ್ಯರು ಲಭಿಸದೆ ರೋಗಿಗಳು ಸುಮಾರು 8 ಕಿ.ಮೀ. ದೂರದ ಹೋಬಳಿ ಕೇಂದ್ರಗಳಾದ ರಾಮನಾಥಪುರ ಅಥವಾ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.<br /> <br /> ವಾರದಲ್ಲಿ 5 ದಿನ ಮಾತ್ರ ವೈದ್ಯರು ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಉಳಿದ ದಿನಗಳಲ್ಲಿ ಕಾಯಿಲೆಗೆ ತುತ್ತಾಗುವವರ ಗೋಳು ಕೇಳುವವರಿಲ್ಲ. 5 ದಿನ ಬರುವ ವೈದ್ಯರು ಸಹ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ದೂರುತ್ತಾರೆ ರೋಗಿಗಳು.<br /> <br /> ಇದರಿಂದ ಗರ್ಭಿಣಿಯರು ಮತ್ತು ವೃದ್ಧರಿಗೆ ತುಂಬ ತೊಂದರೆಯಾಗುತ್ತಿದೆ. ಈ ಆಸ್ಪತ್ರೆಗೆ ಹೊಂದಿಕೊಂಡಂತೆ ಹನ್ಯಾಳು, ಲಕ್ಕೂರು, ರಾಗಿಮರೂರು, ಸೋಂಪುರ, ಮತ್ತಿಗೋಡು, ವಡ್ಡರಹಳ್ಳಿ, ಮಧುರನಹಳ್ಳಿ, ಆನಂದೂರು ಗ್ರಾಮಸ್ಥರಿಗೂ ಸಹ ತೊಂದರೆಯಾಗಿದೆ.<br /> <br /> ಕಾಮಗಾರಿ ಸ್ಥಗಿತ: ಈಗಿರುವ ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿ 2–3 ವರ್ಷ ಕಳೆಯುತ್ತಿದ್ದರೂ, ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಕಟ್ಟಡಕ್ಕಾಗಿ ಸರ್ಕಾರದಿಂದ ₨ 1 ಕೋಟಿ ಅನುದಾನ ಸಿಕ್ಕಿದೆ. ಇದರ ಜತೆಗೆ ಗ್ರಾಮಸ್ಥರಿಂದ ವಂತಿಗೆಯ ರೂಪದಲ್ಲಿ ₨ 1 ಲಕ್ಷ ಹಣವನ್ನು ಸಂಗ್ರಹಿಸಿ 20 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಜಮಾ ಮಾಡಲಾಗಿದೆ.<br /> <br /> ಇಷ್ಟೆಲ್ಲಾ ಹಣ ಬಿಡುಗಡೆ ಆದರೂ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರಿಗೆ ಅರಗಿಸಿಕೊಳ್ಳಲಾಗದ ಸಮಸ್ಯೆಯಾಗಿದೆ. ಕಾಮಗಾರಿ ಪಡೆದ ಗುತ್ತಿಗೆದಾರರನ್ನು ಗ್ರಾಮಸ್ಥರು ಪ್ರಶ್ನಿಸಿದಾಗ, ‘ಇಲ್ಲಿಯವರೆಗೆ ಮಾಡಿರುವ ಕಾಮಗಾರಿಯ ಹಣ ಬಂದಿಲ್ಲ ಅದಕ್ಕಾಗಿ ಕೆಲಸ ನಿಲ್ಲಿಸಲಾಗಿದೆ’ ಎನ್ನುತ್ತಾರೆ ಎಂದು ಗ್ರಾಮಸ್ಥರು ದೂರಿದರು.<br /> <br /> ವಾರಸುದಾರರಿಲ್ಲದ ಸರ್ಕಾರಿ ಕಟ್ಟಡಗಳು: ಸುಮಾರು 40 ವರ್ಷಗಳ ಹಿಂದೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸರ್ಕಾರಿ ನೌಕರರಿಗೆಂದು ನಾಲ್ಕು ವಸತಿ ನಿಲಯಗಳನ್ನು ನಿರ್ಮಿಸಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಯಾವ ಇಲಾಖೆಯ ನೌಕರರೂ ಈ ಕಟ್ಟಡದಲ್ಲಿ ವಾಸ ಮಾಡಿಲ್ಲ. ಇದರಿಂದಾಗಿ ಕಟ್ಟಡಗಳು ಪಾಳುಬಿದ್ದು, ಹಾವು ಹಲ್ಲಿಗಳ ವಾಸ ಸ್ಥಾನವಾಗಿವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದೇಗೌಡ.<br /> <br /> ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಿ ಮತ್ತು ನೂತನ ಕಟ್ಟಡದ ಕಾಮಗಾರಿ ಮುಗಿಸಿ ಲೋಕರ್ಪಣೆಯಾಗಲಿ ಎಂಬ ಆಶಯ ಇಲ್ಲಿನ ಗ್ರಾಮಸ್ಥರದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>